ಬೆಂಗಳೂರು : ನ್ಯೂ ಇಯರ್ ಪಾರ್ಟಿ ಮಾಡಲು ಹಣ ಬೇಕೆಂದು2ಕಿಡ್ನಾಪ್ ಮತ್ತು1 ಕೊಲೆ ಮಾಡಿದ್ದು, ಮೊದಲು ಕಿಡ್ನಾಪ್ ಆದವನು ಮಿಸ್ ಆಗಿದ್ದಕ್ಕೆ ಮತ್ತೊಂದು ಕೊಲೆ ಮಾಡಿದ್ದಾರೆ.ಕಿಡ್ನಾಪ್ ಆಗಿದ್ದ ಕಿಶನ್ ಎಸ್ಕೇಪ್ ಆಗಿದ್ದಕ್ಕೆ ಗುರುಸಿದ್ದಪ್ಪನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ.
42 ವರ್ಷದ ಗುರು ಸಿದ್ದಪ್ಪ ಕೊಲೆಯಾಗಿರುವ ವ್ಯಕ್ತಿಯಾಗಿದ್ದು,ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳಾದ ಸಂಜಯ್, ಆನಂದ್, ಸುಹೇಲ್, ತಿಮ್ಮ ಅರೆಸ್ಟ್ ಆಗಿದ್ದಾರೆ.ಆರೋಪಿ ಸಂಜಯ್ ಎಂಬುವನು ಜ್ಞಾನಭಾರತಿ ಬಳಿ ಗ್ಯಾರೇಜ್ ಇಟ್ಟುಕೊಂಡಿದ್ದನು.ಹಣ ಮಾಡ್ಬೇಕು ಎಂದು ಸಂಜಯ್ ಕಿಡ್ನಾಪ್ ಪ್ಲಾನ್ ರೂಪಿಸಿದ್ದನು.
ಕಾರ್ಪೆಂಟರ್ ಆಗಿದ್ದ ಸಂಜಯ್ ಪಂಡಿತ್ಗೆ ಸ್ಕೆಚ್ ರೆಡಿಯಾಗಿತ್ತು. ಕಾರ್ಪೆಂಟರ್ ಕೆಲಸ ಇದೆ ಅಂತಾ ಹೇಳಿ ಸಂಜಯ್ ಪಂಡಿತ್ಗೆ ಕರೆ ಮಾಡಿದ್ದನು. ಸಂಜಯ್ ಪಂಡಿತ್ ತನ್ನ ಬದಲು ಕಿಶನ್ ಎಂಬಾತನನ್ನು ಕಳಿಸಿದ್ದ.ಆಗ ಕಿಶನ್ನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.ಸಂಜಯ್ ಪಂಡಿತ್ಗೆ ಕರೆ ಮಾಡಿದಾಗ ಕುಂದಾಪುರದಲ್ಲಿದ್ದೇನೆ ಎಂದಿದ್ದನು.ಸೀದಾ ಕುಂದಾಪುರಕ್ಕೆ ಕರ್ಕೊಂಡು ಹೋದಾಗ ಕಿಶನ್ ಎಸ್ಕೇಪ್ ಆಗಿದ್ದನು.
ಕಿಶನ್ ಮಿಸ್ ಆಗ್ತಿದ್ದಂತೆ ಕಿಡ್ನಾಪರ್ಸ್ ಸೀದಾ ಬೆಂಗಳೂರಿಗೆ ಬಂದಿದ್ದರು.ಗುರುಸಿದ್ದಪ್ಪನಿಂದ 5 ಲಕ್ಷ ವಸೂಲಿ ಮಾಡಿದ್ದರು.ಜೀವಂತವಾಗಿ ಬಿಟ್ರೆ ಕೇಸ್ ಕೊಡ್ತಾನೆ ಎಂದು ಕೊಲೆ ಮಾಡಿದ್ರು.ಮಂಚನಬೆಲೆ ಡ್ಯಾಮ್ ಬಳಿ ಸಂಜಯ್ ಟೀಂ ಕೊಲೆ ಮಾಡಿ ಎಸೆದಿದ್ದರು.ಅಷ್ಟರಲ್ಲಿ ಗುರುಸಿದ್ದಪ್ಪ ಪತ್ನಿ ಠಾಣೆಗೆ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು.
ಪೊಲೀಸರಿಗೆ ಕಿಡ್ನಾಪ್ ಮಾಹಿತಿ ಸಿಕ್ಕ ಕೂಡಲೇ ಕಾಲ್ ಡಿಟೇಲ್ಸ್ ಸಂಗ್ರಹ ಮಾಡಿದ್ದರು.ಗುರುಸಿದ್ದಪ್ಪನ ಮೃತದೇಹ ಪ್ರಾಣಿಗಳು ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಳ್ಳಾರಿ ಪಾಲಿಕೆಯ ನೂತನ ಮೆಯರ್ ಆಗಿ ಬಿ.ಶ್ವೇತಾ ಆಯ್ಕೆ..!