ಬೆಂಗಳೂರು : ಖ್ಯಾತ ಚಿನ್ನದ ವ್ಯಾಪಾರಿ, ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬುನನ್ನು ಕದ್ದ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ತುರುವೇಕೆರೆ ಠಾಣಾ ಕೇಸ್ನಲ್ಲಿ ಅಟ್ಟಿಕಾ ಗೋಲ್ಡ್ ಬಾಬು ರಿಲೀಸ್ ಅಗಿದ್ದನು.
ಆದರೆ ಇದೀಗ ತುಮಕೂರು ಜೈಲಿನಿಂದ ಹೊರಬಂದ ಕೂಡಲೇ ಅಟ್ಟಿಕಾ ಗೋಲ್ಡ್ ಬಾಬುನನ್ನು ದೊಡ್ಡಬಳ್ಳಾಪುರ ರೂರಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಕೇಸ್ನಲ್ಲಿ ಅರೆಸ್ಟ್ ಮಾಡಲಾಗಿದೆ.
ಎರಡು ದಿನದ ಹಿಂದೆ ಕಳ್ಳತನ ಮಾಲು ಖರೀದಿ ಮಾಡಿದ್ದ ಕೇಸ್ನಲ್ಲಿ ಅಟ್ಟಿಕಾ ಬಾಬು ಅರೆಸ್ಟ್ ಮಾಡಲಾಗಿತ್ತು. ಹೈಕೋರ್ಟ್ನಲ್ಲಿ ಅರೆಸ್ಟ್ ಪ್ರಶ್ನಿಸಿ ಅಟ್ಟಿಕಾ ಗೋಲ್ಡ್ ಬಾಬು ಅರ್ಜಿ ಸಲ್ಲಿಸಿದ್ದನು. ಅಟ್ಟಿಕಾ ಗೋಲ್ಡ್ ಮಾಲೀಕ ನಾನಲ್ಲ. ನನಗು ಅಟ್ಟಿಕಾ ಗೋಲ್ಡ್ ಗು ಸಂಬಂಧ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದನು.
ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಅಟ್ಟಿಕಾ ಗೋಲ್ಡ್ ಬಾಬುನನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ಆದೇಶದ ಮೇಲೆ ರಿಲೀಸ್ ಆಗ್ತಾ ಇದ್ದಂತೆ ಮತ್ತೊಂದು ಕೇಸ್ನಲ್ಲಿ ಅರೆಸ್ಟ್ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸಾದೀಕ್ ಪಾಷ ನೇತ್ರತ್ವದಲ್ಲಿ ಆರೋಪಿಗಳು ನೀಡಿದ ಮಾಹಿತಿ ಅಧಾರಿಸಿ ಮತ್ತೆ ಬಾಬುನನ್ನು ಬಂಧಿಸಿಲಾಗಿದೆ. ಕಳ್ಳತನ ಮಾಡಿದ್ದ ಚಿನ್ನಭರಣ ಖರೀದಿ ಮಾಡಿದ್ದ ಅಟ್ಟಿಕಾ ಗೋಲ್ಡ್ ಬಾಬುನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆ ಮಾಜಿ ರೌಡಿಶೀಟರ್ ಅಟ್ಟಿಕಾ ಗೋಲ್ಡ್ ಬಾಬುನನ್ನು ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ : ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಹಾಗೂ ಖಡಕ್ ಅಧಿಕಾರಿ ಡಿಜಿಪಿ ಕಮಲ್ ಪಂತ್ ಸೇವೆಯಿಂದ ನಿವೃತ್ತಿ..!