ಬೆಂಗಳೂರು : ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಜ್ವಲ್ ಸಹೋದರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಹಾಸನದ ಸೆನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಇದೀಗ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಗೃಹ ಸಚಿವರು ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ದೂರು ಬಂದ ನಂತ್ರ FIR ಆಗಿದೆ, ತನಿಖೆ ಮಾಡ್ತಿದ್ದಾರೆ. ಈ ಪ್ರಕರಣವನ್ನೂ CIDಗೆ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಾ. ಜಿ.ಪರಮೇಶ್ವರ್ ಮಾತನಾಡಿ, ಈ ರೀತಿಯ ಸೀರೀಸ್ ಆಫ್ ಕೇಸ್ CIDಗೆ ಕೊಟ್ಟಿದ್ದೇವೆ. ಇದನ್ನು ಕೂಡ CIDಗೆ ಕೊಟ್ಟಿದ್ದೇವೆ, ಸೂರಜ್ ರೇವಣ್ಣ ಕೊಟ್ಟಿರುವ ದೂರಿನ ಬಗ್ಗೆಯೂ ತನಿಖೆ ಆಗುತ್ತೆ. ಸೂರಜ್ ಮಾಡಿರೋ ಆರೋಪವನ್ನೂ ಪರಿಶೀಲನೆ ಮಾಡ್ತಾರೆ, ಯಾರೇ ತಪ್ಪು ಮಾಡಿದ್ದರೂ ಪೊಲೀಸರು ಸೂಕ್ತ ಕ್ರಮ ಜರುಗಿಸುತ್ತಾರೆ ಎಂದಿದ್ದಾರೆ.
ಸೂರಜ್ ರೇವಣ್ಣ ತನ್ನ ಮೇಲೆ ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ದೂರು ನೀಡಲು ಹಾಸನದ CEN ಠಾಣೆಗೆ ಬಂದಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ವಿರುದ್ದ FIR ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೂ ಸೂರಜ್ ವಿಚಾರಣೆ ಮಾಡಿ, ಬಳಿಕ ಮಿಡ್ನೈಟ್ನಲ್ಲಿ 1.30ರ ಸುಮಾರಿಗೆ ಪೊಲೀಸರು ನಿಗೂಢ ಸ್ಥಳಕ್ಕೆ ಸೂರಜ್ ರೇವಣ್ಣನ್ನು ಕರೆದೊಯ್ದಿದ್ದು ಅಲ್ಲಿಯೂ ವಿಚಾರಣೆ ನಡೆಸಿ, ನಂತರ ಬಂಧಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರ 6 ತಿಂಗಳು ನಡೆಯುತ್ತಾ, 3 ತಿಂಗಳು ನಡೆಯುತ್ತಾ ಗೊತ್ತಿಲ್ಲ : ಕೇಂದ್ರ ಸಚಿವ ವಿ ಸೋಮಣ್ಣ..!