ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪ್ರಕರಣವನ್ನು ಬಹಿರಂಗವಾಗಿ ಖಂಡಿಸಿದ ಕೆಲವೇ ಕೆಲವರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಕೂಡ ಒಬ್ಬರು.
ಈ ಕ್ರೂರ ಅಪರಾಧಗಳನ್ನು ಹೊರ ತಂದಿದ್ದಕ್ಕೆ ನಟಿ ರಮ್ಯಾ ಅವರು ಮಾಧ್ಯಮಗಳಿಗೆ ಹ್ಯಾಟ್ಸಾಪ್ ಹೇಳಿದ್ದಾರೆ. ಈ ಕೇಸ್ ತಾರ್ಕಿಕ ಅಂತ್ಯಕ್ಕೆ ಹೋಗಿ ನ್ಯಾಯ ಸಿಗುವಂತಾಗಬೇಕು, ನ್ಯಾಯ ಸಿಗದಿದ್ದರೆ ನಾವು ಸಮಾಜಕ್ಕೆ ಇನ್ನೆಂಥಾ ಸಂದೇಶ ಕಳಿಸಲು ಸಾಧ್ಯ. ಈ ಕೇಸ್ನಲ್ಲಿ ಸತ್ಯ ಹೊರಬರಲು ಮಾಧ್ಯಮ ಮತ್ತು ಪೊಲೀಸರು ಶ್ರಮಿಸುತ್ತಿದ್ದಾರೆ, ಕಾನೂನು ಉಲ್ಲಂಘನೆ ಮಾಡುವವರ ಮುಖವಾಡ ಬಯಲಾಗುತ್ತಿದೆ. ಶ್ರೀಮಂತ, ಶಕ್ತಿವಂತರು ಒಂದು ಕಡೆ-ಬಡವರು, ಮಹಿಳೆಯರು, ಮಕ್ಕಳು ಮತ್ತೊಂದೆಡೆ. ಅಬಲರ ಮೇಲೆ ನಡೆದ ದೌರ್ಜನ್ಯ, ಹಿಂಸಾಚಾರ ಸಹಿಸುವಂಥದ್ದಲ್ಲ ಎಂದು ಪ್ರಜ್ವಲ್, ಸೂರಜ್, ಬಿಎಸ್ವೈ, ದರ್ಶನ್ ಪ್ರಕರಣ ಉಲ್ಲೇಖಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ಪ್ರಭಾವಿಗಳ ಪ್ರಕರಣಗಳನ್ನು ಬಯಲು ಮಾಡಿದ್ದೇ ಪೊಲೀಸ್ ಮತ್ತು ಮಾಧ್ಯಮ, ಯಾವ ಒತ್ತಡಕ್ಕೂ ಮಣಿಯದೇ ಪೊಲೀಸರು ಮತ್ತು ಮಾಧ್ಯಮ ಕೆಲಸ ಮಾಡ್ತಿವೆ. ಮಾಧ್ಯಮ ಮತ್ತು ಪೊಲೀಸರ ಕಾರ್ಯವೈಖರಿಗೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ದರ್ಶನ್ ಕಂಡರೆ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರುತ್ತಿದೆಯೇ? ಈ ಸ್ಟೋರಿ ಓದಿ..!