ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಇಂದು ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾಗಿರುವ ಹಿನ್ನೆಲೆ, ನೆಚ್ಚಿನ ನಟನನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ದರ್ಶನ್ ಮಾಡಿರುವ ಕೃತ್ಯ ಬಯಲಾಗುತ್ತಿದ್ದಂತೆಯೇ ಡಿ ಬಾಸ್ ಫ್ಯಾನ್ಸ್ ತಮ್ಮ ವಾಹನದ ಮೇಲಿರುವ ಸ್ಟಿಕ್ಕರ್ ಕಿತ್ತುಹಾಕುವ ಮೂಲಕ ಈ ಹತ್ಯೆಯನ್ನು ಖಂಡಿಸಿದ್ದಾರೆ.
ಅಭಿಮಾನಿಗಳು ತಮ್ಮ ವಾಹನಗಳಿಗೆ ಅಂಟಿಸಿರುವ ರೇಡಿಯಂ ಸ್ಟಿಕ್ಕರನ್ನು ಚಾಕುವಿನಿಂದ ಸ್ಕ್ರ್ಯಾಚ್ ಮಾಡಿ ತೆಗೆದು ಹಾಕುತ್ತಿದ್ದಾರೆ. ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು, ಡಿ ಬಾಸ್ ಹೆಸರು ನಮ್ಮ ಬೈಕ್ಗಳಲ್ಲಿ ಬೇಡ ಎಂದು ಅಭಿಮಾನಿಗಳು ತೆಗೆದು ಹಾಕುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕರ್ನಾಟಕದಲ್ಲಿ ನಟ ದರ್ಶನ್ ಮೇಲಿನ ಅಭಿಮಾನಕ್ಕಾಗಿ ಬೈಕ್, ಕಾರ್ಗಳ ಮೇಲೆ ಅಭಿಮಾನಿಗಳು ಡಿ ಬಾಸ್ ಸ್ಟಿಕ್ಕರ್ ಅಂಟಿಸುತ್ತಿದ್ದರು. ಆದರೀಗ ರೇಣುಕಾಸ್ವಾಮಿ ಭೀಕರ ಹತ್ಯೆಯ ಹಿಂದಿನ ಕೈಗಳು ಯಾರು ಎಂಬ ಸಂಗತಿ ಬಯಲಾದಂತೆ ಫ್ಯಾನ್ಸ್ ತಮ್ಮ ವಾಹನದ ಮೇಲಿರುವ “ಡಿ ಬಾಸ್” ಸ್ಟಿಕ್ಕರ್ ಕಿತ್ತು ಹಾಕುತ್ತಿದ್ದಾರೆ.
ಇದನ್ನೂ ಓದಿ : ದರ್ಶನ್ ಕಂಡರೆ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರುತ್ತಿದೆಯೇ? ಈ ಸ್ಟೋರಿ ಓದಿ..!