Download Our App

Follow us

Home » Uncategorized » ದರ್ಶನ್​​ ಪತ್ನಿ ವಿಜಯಲಕ್ಷ್ಮಿ ನಿನ್ನೆ ಸ್ಟೇಷನ್​ನಲ್ಲಿ ಕಣ್ಣೀರು ಹಾಕಿದ್ದೇಕೆ?

ದರ್ಶನ್​​ ಪತ್ನಿ ವಿಜಯಲಕ್ಷ್ಮಿ ನಿನ್ನೆ ಸ್ಟೇಷನ್​ನಲ್ಲಿ ಕಣ್ಣೀರು ಹಾಕಿದ್ದೇಕೆ?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಸತತ 9 ದಿನಗಳಿಂದ ಸೆರೆವಾಸದಲ್ಲಿದ್ದು, ಇಂದಿಗೆ ಕಸ್ಟಡಿ ಅವಧಿ ಅಂತ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಜಯಲಕ್ಷ್ಮೀ ಅವರಿಗೂ ನೋಟಿಸ್ ​​ನೀಡಲಾಗಿತ್ತು.

ಪೊಲೀಸರ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀಯವರು ಕಪ್ಪು ಕಾರಿನಲ್ಲಿ ನೇರವಾಗಿ ಠಾಣೆಗೆ ಬಂದಿದ್ದರು. ದರ್ಶನ್ ಶೂ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ  ಪೊಲೀಸರು ಸತತ 5 ಗಂಟೆ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.

ವಿಜಯಲಕ್ಷ್ಮಿ ಅವರನ್ನ ವಿಚಾರಣೆ ನಡೆಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಕೊಲೆ ನಡೆದ ದಿ‌ನ ನೀವು ಯಾವ ಮನೆಯಲ್ಲಿ ಇದ್ರಿ. ಅವತ್ತು ರಾತ್ರಿ ದರ್ಶನ್ ಮನೆಗೆ ಎಷ್ಟೊತ್ತಿಗೆ ಬಂದಿದ್ರು.
ದರ್ಶನ್ ಬಳಸಿದ್ದ ಶೂ ನೀವಿದ್ದ ಅಪಾರ್ಟ್ಮೆಂಟ್​​ಗೆ ಬಂದಿದ್ದೇಗೆ. ನಿಮಗೆ ಕೊಲೆ ನಡೆದಿದ್ದರ ಬಗ್ಗೆ ಗೊತ್ತಿತ್ತಾ. ಹೀಗೆ ಅನೇಕ ಪ್ರಶ್ನೆಗಳನ್ನು ವಿಜಯಲಕ್ಷ್ಮಿಗೆ ಪೊಲೀಸರು ಕೇಳಿದ್ದರು.

ವಿಚಾರಣೆಯ ವೇಳೆ ವಿಜಯಲಕ್ಷ್ಮಿ ಅವರು  ರೇಣುಕಾಸ್ವಾಮಿ ಕೊಲೆ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ದರ್ಶನ್ ಕಾಸ್ಟ್ಯೂಮ್ ಅಸಿಸ್ಟೆಂಟ್ ನಮ್ಮ ಮನೆಗೆ ಶೂ ತಂದಿಟ್ಟಿದ್ದ. ನೀವು ಫೋನ್ ಮಾಡಿದ್ಮೇಲೆ, ಶೂಗಳನ್ನು ನಿಮಗೆ ಕೊಟ್ಟಿದ್ದೇನೆ. ಇದು ಬಿಟ್ಟರೆ ಬೇರೆ ಯಾವ ವಿಚಾರವೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಪೊಲೀಸರು ದರ್ಶನ್ -ಪವಿತ್ರಾ ಸಂಬಂಧದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ.  ಸಂಬಂಧದ ಬಗ್ಗೆ ಗೊತ್ತು, ಬೇರೆ ಏನೂ ಕೇಳಬೇಡಿ ಎಂದು ಭಾವುಕರಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ. ವಿಜಯಲಕ್ಷ್ಮಿ ನೀಡಿದ ಎಲ್ಲಾ ಹೇಳಿಕೆಯನ್ನು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್​ : ಇಂದು ಭಾರತ-ಅಫ್ಘಾನಿಸ್ತಾನ ಮುಖಾಮುಖಿ, ಪಂದ್ಯ ಎಷ್ಟು ಗಂಟೆಗೆ ಶುರು?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here