ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯ ಕರ್ಮಕಾಂಡವೊಂದು ಬಯಲಾಗಿದೆ. PG ಗೆ ಪರ್ಮಿಷನ್ ತೆಗೆದುಕೊಂಡು ಆಸ್ಪತ್ರೆ ನಡೆಸ್ತಿರೋದು ಸಾಮಾಜಿಕ ಕಾರ್ಯಕರ್ತರಿಂದ ಬಯಲಾಗಿದೆ.
ಪ್ರತಿಷ್ಠಿತ ಕತ್ರಿಗುಪ್ಪೆ ಏರಿಯಾದಲ್ಲೇ ದಿಗ್ವಿಷ್ ಆಸ್ಪತ್ರೆ ಬಿಬಿಎಂಪಿ ನಿಯಮ ಉಲ್ಲಂಘಿಸಿ, 4 ಮಹಡಿಗಳ ಬೃಹತ್ ಕಟ್ಟಡದಲ್ಲಿ ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿದೆ. ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಯಾವುದೇ ಪರ್ಮಿಷನ್ ಇಲ್ಲ. ಇದು ಕೇವಲ ವಸತಿ ಹಾಸ್ಟೆಲ್ಗೆ ಪರ್ಮಿಷನ್ ತೆಗೆದುಕೊಂಡ ಆಸ್ಪತ್ರೆ ನಡೆಸುತ್ತಿದೆ.
ಆದರೆ ಇದೀಗ ಅಕ್ರಮ ಹಾಸ್ಪಿಟಲ್ನ ಕರ್ಮಕಾಂಡವನ್ನು ಸಾಮಾಜಿಕ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಈ ಆಸ್ಪತ್ರೆಯ ಅಕ್ರಮ ಚಟುವಟಿಕೆಯ ಬಗ್ಗೆ RTO ಕಾರ್ಯಕರ್ತ ರಾಮಲಿಂಗಾರೆಡ್ಡಿ BBMPಗೆ ದೂರು ನೀಡಿ, ಆಸ್ಪತ್ರೆ ಅಕ್ರಮದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಆಸ್ಪತ್ರೆಗೆ ಯಾವುದೇ ಪರ್ಮಿಷನ್ ಇಲ್ಲ. ಆದರೆ ಇಷ್ಟು ವರ್ಷ ರಾಜಾರೋಷವಾಗಿ ಆಸ್ಪತ್ರೆ ನಡೀತಿದ್ರೂ BBMP ಅಧಿಕಾರಿಗಳು ಯಾಕೆ ಸೈಲೆಂಟ್ ಆಗಿದ್ದಾರೆ. ಆಸ್ಪತ್ರೆ ಓನರ್ ಡಾ.ಮನೋಜ್ ಕುಮಾರ್ ಲಂಚ ಕೊಡ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ 1,400 ಕೋಟಿ ರೂ. ಹೂಡಿಕೆಗೆ ಮುಂದಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್..!