ಬೆಂಗಳೂರು : ದರ್ಶನ್ ಆ್ಯಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡುವ ಮೂಲಕ ಬಂಧನಕ್ಕೊಳಗಾಗಿದ್ದಾರೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದ್ದು, ರೇಣುಕಾಸ್ವಾಮಿಗೆ ಖುದ್ದು ದರ್ಶನ್ ಎಸಗಿರೋ ಘನಘೋರ ಕೃತ್ಯದ CD ಈಗ ಕೋರ್ಟ್ಗೆ ಸಲ್ಲಿಕೆ ಆಗಿದೆ.
ದರ್ಶನ್ ಥಳಿಸೋ ದೃಶ್ಯವಿರೋ CD ಈಗ ಕೋರ್ಟ್ಗೆ ಸಲ್ಲಿಕೆಯಾಗಿದ್ದು, ಅದರಲ್ಲಿ ರೇಣುಕಾಸ್ವಾಮಿಗೆ ಖುದ್ದು ದರ್ಶನ್ ಹೊಡೆಯೋ ದೃಶ್ಯವಿದೆ. ಆ ದೃಶ್ಯವಿರೋ CD ನಿಮಗೆ ಸಿಕ್ಕಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರ.
ಇನ್ನು ಭಯಾನಕ, ಭೀಭತ್ಸ ಕೃತ್ಯ ಎಸಗಿರೋ ದರ್ಶನ್ಗೆ ಈ CDನೇ ಕಂಟಕವಾಲಿದೆ. ಈ ಸಿಡಿ ನೋಡಿದ ನ್ಯಾಯಾಧೀಶರೇ ದಂಗಾಗಿಹೋಗಿದ್ದು, ಅದೇ ಕಾರಣಕ್ಕೆ ದರ್ಶನ್ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಯಾವುದೇ ಫಿಲ್ಮ್ನಲ್ಲೂ ವಿಲನ್ಗಳು ಈ ರೀತಿಯ ಕೃತ್ಯವನ್ನ ಮಾಡಿಲ್ಲ. ಹೀಗಾಗಿ ಇಡೀ ಕೇಸ್ನಲ್ಲಿ ದರ್ಶನ್ಗೆ CDಯಿಂದಲೇ ಸಂಕಷ್ಟ ಶುರುವಾಗಲಿದೆ.
ಇದನ್ನೂ ಓದಿ : ಚೌಕಿದಾರ್ ಆದ ಪೃಥ್ವಿ ಅಂಬಾರ್ – ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಜೊತೆಯಾದ ಶ್ರೀಮುರಳಿ..!