ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ನ್ನು ಬಚಾವ್ ಮಾಡಲು 30 ಲಕ್ಷ ಡೀಲ್ ಆಗಿತ್ತು. ಒಂದಲ್ಲಾ.. ಎರಡಲ್ಲಾ.. ಮೂರು ಹಂತಗಳಲ್ಲಿ ಡೀಲ್ ಆಗಿತ್ತು, ಕಿಡ್ನಾಪ್ಗೆ ಒಂದು ಡೀಲ್, ಬಡಿದು ಸಾಯಿಸೋಕೆ ಒಂದು ಡೀಲ್, ಶವ ಬಿಸಾಡಿ ಸಾಕ್ಷ್ಯ ನಾಶಕ್ಕೆ ಮತ್ತೊಂದು ಡೀಲ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಬಯಲಾಗಿದೆ.
ಒಂದೊಂದು ಡೀಲ್ಗೆ, ಒಂದೊಂದು ಟೀಂಗೂ ಹಣ ಕೊಟ್ಟು ಎಸ್ಕೇಪ್ ಆಗಲು ಆರೋಪಿಗಳು ಪ್ಲಾನ್ ಮಾಡಿದ್ದರು. ಆದರೆ ಎಲ್ಲಾ ಉಲ್ಟಾ ಹೊಡೆದ ಮೇಲೆ ದರ್ಶನ್ ರಾಕ್ಷಸ ಮುಖ ಬಯಲಾಗಿದೆ. A-13 ದೀಪಕ್ನಿಂದ ಲಕ್ಷ-ಲಕ್ಷ ಹಣ ಆರೋಪಿಗಳಿಗೆ ಹೋಗಿತ್ತು. ದರ್ಶನ್ಗೆ ಸಾಥ್ ಕೊಟ್ಟ ದೀಪಕ್ ಪ್ರಭಾವಿ ರಾಜಕಾರಣಿಯ ಸಂಬಂಧಿ. ನಿಖಿಲ್, ಕಾರ್ತಿಕ್, ಕೇಶವಮೂರ್ತಿಗೆ ದೀಪಕ್ ತಲಾ 5 ಲಕ್ಷ ನೀಡಿದ್ದ. ಆರೋಪಿಗಳು ಹಣ ಪಡೆದಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳು ಪಡೆದಿರುವ ತಲಾ ಐದು ಲಕ್ಷ ಹಣವನ್ನ ಜಫ್ತಿ ಮಾಡಲು ಸಿದ್ದತೆ ನಡೆಯುತ್ತಿದ್ದು, ಕೊಲೆ ನಡೆದ ಬಳಿಕ ಗ್ಯಾಂಗ್ ದರ್ಶನ್ ಬಳಿ 30 ಲಕ್ಷ ಹಣ ಪಡೆದಿತ್ತು. ಪ್ರದೋಶ್ ಮತ್ತು ದೀಪಕ್ ಹಣದ ವ್ಯವಹಾರ ನೋಡಿಕೊಂಡಿದ್ರು, ಉಳಿದಂತೆ ಕೋರ್ಟ್ ಬೇಲ್ಗೆ ಆಗೋ ಖರ್ಚು ವೆಚ್ಚ ನೀಡಿದ್ದರು. ಜೊತೆಗೆ ಕುಟುಂಬಕ್ಕೂ ಹಣ ನೀಡೋದಾಗಿ ತಿಳಿಸಿದ್ರು, ನಿಖಿಲ್, ಕೇಶವಮೂರ್ತಿ, ಕಾರ್ತಿಕ್ ಮೂವರು ಆರ್.ಆರ್.ನಗರದ ಶೆಡ್ನಲ್ಲಿ ಕೂಲಿ ಕೆಲಸದವರು ರೇಣುಕಾಸ್ವಾಮಿ ಮೃತದೇಹವನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದರು.
ಇದನ್ನೂ ಓದಿ : ದರ್ಶನ್ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿಗೆ ಬೆದರಿಕೆ ಕರೆ..!