ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳ ಕೃತ್ಯ ನಿಲ್ಲದ್ದಾಗಿದ್ದು, ಪುಂಡರು ಕಾರು ತಡೆದು ರಂಪಾಟ ಮಾಡಿರುವ ಘಟನೆ ನಗರದ ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಯುವಕರ ಭಯಕ್ಕೆ ಬೈಕ್ ಮೇಲೆ ಡ್ರೈವರ್ ಕಾರು ಹರಿಸಿದ್ದಾನೆ. ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ.
ಓವರ್ ಟೇಕ್ ವಿಚಾರಕ್ಕೆ ಯುವಕರು ಗಲಾಟೆ ತಗೆದು ಕಾರು ಅಡ್ಡಗಟ್ಟಿದ್ದರು. ಕಾರಿನ ಹಿಂಭಾಗಕ್ಕೆ ಕಾಲಿನಿಂದ ಒದ್ದು ಹುಚ್ಚಾಟ ಮೆರೆದಿದ್ದರು. ಕೂಡಲೇ ಕಾರು ಮಾಲೀಕ ಪೊಲೀಸರಿಗೆ ಫೋನ್ ಮಾಡಲು ಹೋಗಿದ್ದ, ಪುಂಡರಿಂದ ಪಾರಾಗಲು ಕಾರ್ ವೇಗವಾಗಿ ಓಡಿಸಲು ಶುರು ಮಾಡಿದ್ದ, ಈ ವೇಳೆ ಕಿಡಿಗೇಡಿಗಳು ಕಾರ್ಗೆ ಅಡ್ಡ ಬೈಕ್ ತಂದು ನಿಲ್ಲಿಸಿದ್ದರು. ಭಯದಿಂದ ಬೈಕ್ಗೆ ಟಚ್ ಮಾಡಿ ಕಾರು 100 ಮೀಟರ್ ದೂರ ಹೋಗಿದೆ. ಡ್ರೈವರ್ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ವಾಪಸ್ ಹೋಗಿದ್ದಾನೆ.
ಇದನ್ನೂ ಓದಿ : ಬಿಗ್ಬಾಸ್ ಸೀಸನ್-10ರಲ್ಲಿ ಬೆಂಕಿ ಬಂತೋ..ಯಾರು ಆ ಬೆಂಕಿ?
Post Views: 722