ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.
ರೇವಣ್ಣ ಫ್ಯಾಮಿಲಿಗೆ ಇದೀಗ ಟೆನ್ಷನ್ ಶುರುವಾಗಿದ್ದು, ಭವಾನಿ ಬೇಲ್ ಅರ್ಜಿ ವಜಾ ಆಗ್ತಿದ್ದಂತೆ SIT ಕೂಡ ಅಲರ್ಟ್ ಆಗಿದೆ. ಇಂದು ವಿಚಾರಣೆಗೆ ಭವಾನಿ ಹಾಜರಾದ್ರೇ ಅರೆಸ್ಟ್ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಕೆ.ಆರ್.ನಗರ ಸಂತ್ರಸ್ತೆ ಕಿಡ್ನಾಪ್ ಕೇಸ್ನಲ್ಲಿ ಭವಾನಿ ಅವರ ವಿಚಾರಣೆ ನಡೆಸಲು ಎಸ್ಐಟಿ ಸಜ್ಜಾಗಿದ್ದು, CRPC -41 ರಡಿ ಭವಾನಿ ರೇವಣ್ಣಗೆ ವಿಚಾರಣೆ ನೋಟಿಸ್ ನೀಡಿದೆ.
ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ನಿಗೂಢ ಸ್ಥಳ ಸೇರಿದ್ರಾ ಭವಾನಿ? ನಿನ್ನೆಯಿಂದಲೇ ಭವಾನಿ ರೇವಣ್ಣ ಮೊಬೈಲ್ ಸ್ವಿಚಡ್ ಆಫ್ ಆಗಿದ್ದು, ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ನಿಗೂಢ ಸ್ಥಳ ಸೇರಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಗ ಪ್ರಜ್ವಲ್ SIT ಕಸ್ಟಡಿಗೆ ಸೇರ್ತಿದ್ದಂತೆ ಅಮ್ಮ ಭವಾನಿಗೆ ಟೆನ್ಷನ್ ಶುರುವಾಗಿದ್ದು, ಇಂದು ವಿಚಾರಣೆಗೆ ಹಾಜರಾಗದೇ ಇದ್ರೆ ವಾರಂಟ್ ಜಾರಿ ಸಾಧ್ಯತೆಯಿದೆ.
ಜಾಮೀನು ಅರ್ಜಿ ವಜಾ ಆದ್ಮೇಲೆ ಹೈಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ. ಭವಾನಿ ರೇವಣ್ಣ ಸೋಮವಾರ ಹೈಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಹೈಕೋರ್ಟ್ ಮೆಟ್ಟಿಲೇರೋ ಮುನ್ನವೇ ಭವಾನಿ ಬಂಧನವಾಗುತ್ತಾ? ಎಂದು ಇಂದು ಗೊತ್ತಾಗಲಿದೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ರಚಿಸಿದ ಸರ್ಕಾರ..!