ಬೆಂಗಳೂರು : ವಾಲ್ಮೀಕಿ ನಿಗಮ ಅಕ್ರಮದ ತನಿಖೆಯಲ್ಲಿ ಸ್ಫೋಟಕ ಸತ್ಯಯೊಂದು ಬಯಲಾಗಿದೆ. CID ಪ್ರಾಥಮಿಕ ತನಿಖೆಯಲ್ಲಿ 94 ಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ಪಾತ್ರವೇ ಇಲ್ಲ eMdu ತಿಳಿದು ಬಂದಿದೆ.
94 ಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ಪಾತ್ರವೇ ಇಲ್ಲ. ಉದ್ಯಮಿಯೊಬ್ಬರಿಗೆ ಹಣಕಾಸಿನ ಸಹಾಯ ಮಾಡಲು ನಿಗಮದ ಹಣಕ್ಕೆ ಯೂನಿಯನ್ ಬ್ಯಾಂಕ್ ಅಧಿಕಾರಿಗಳೇ ಕನ್ನ ಹಾಕಿದ್ದಾರೆ. ಹಗರಣವನ್ನು ತನಿಖೆಗೆ ಒಪ್ಪಿಸಿ ಬಯಲು ಮಾಡಿದ್ದೇ ಸಚಿವ ನಾಗೇಂದ್ರ ಆಗಿದ್ದು, ಇದರೊಂದಿಗೆ ಬ್ಯಾಂಕ್ ಹಿರಿಯ ಅಧಿಕಾರಿಗಳ ವಿರುದ್ಧ FIRಗೆ ಸೂಚಿಸಿದ್ದರು.
ಇನ್ನು ಈಗಾಗಲೇ ಈ ಪ್ರಕರಣ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಚಿವ ನಾಗೇಂದ್ರ ಸಸ್ಪೆಂಡ್ ಮಾಡಿದ್ದರು. ಇದರೊಂದಿಗೆ 6 ಬ್ಯಾಂಕ್ ಅಧಿಕಾರಿಗಳ ಮೇಲೆ FIR ದಾಖಲಾಗಿತ್ತು. ಇದೀಗ ತನಿಖೆಯ ಪಿನ್ ಟು ಪಿನ್ ಮಾಹಿತಿಗಾಗಿ ಸಚಿವ ನಾಗೇಂದ್ರ ನಿರಂತರ ಸಭೆ ಮಾಡುತ್ತಿದ್ದು, ವರ್ಗಾವಣೆಯಾದ ಹಣ ಮರಳಿ ನಿಗಮಕ್ಕೆ ಬರೋವರೆಗೂ ವಿರಮಿಸಲ್ಲ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಯೂನಿಯನ್ ಬ್ಯಾಂಕ್ ಕರ್ಮಕಾಂಡಕ್ಕೆ ವಾಲ್ಮೀಕಿ ನಿಗಮ ಬಲಿಯಾಗಿದೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ 94 ಕೋಟಿ ಕೇಸ್ಗೆ ಬಿಗ್ ಟ್ವಿಸ್ಟ್ - ಕಾಂಗ್ರೆಸ್ ಆಪ್ತ ಎಂದು ಹೇಳಲಾಗಿದ್ದ ನಾಗರಾಜ್ ಬಿಜೆಪಿ ಆಪ್ತ..!