ಬೆಂಗಳೂರು : ಸಿಎಂ ಸಿದ್ದರಾಮಯ್ಯನವರೇ ಮಂತ್ರಿ ನಾಗೇಂದ್ರ ಮೇಲೆ FIR ಯಾಕೆ ಹಾಕಿಲ್ಲ. ಅಧಿಕಾರಿ ಚಂದ್ರಶೇಖರನ್ ಡೆತ್ನೋಟ್ನಲ್ಲಿ ಸಚಿವರ ಉಲ್ಲೇಖ ಆಗಿದೆ. ಸಚಿವ ನಾಗೇಂದ್ರ ಮೇಲೆ ಕೊಲೆ ಕೇಸ್ ಹಾಕಿ ಅರೆಸ್ಟ್ ಮಾಡಿ. FIR ದಾಖಲು ಮಾಡಿರುವ ಅಧಿಕಾರಿಗಳನ್ನು ಯಾಕಿನ್ನೂ ಅರೆಸ್ಟ್ ಮಾಡಿಲ್ಲ ಎಂದು ಸಿದ್ದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸರಣಿ ಪ್ರಶ್ನೆ ಹಾಕಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆಗೆ ಬೆಂಗಳೂರಿನಲ್ಲಿ ಆಗ್ರಹಿಸಿರುವ ಆರ್.ಅಶೋಕ್ ಅವರು, ಈಶ್ವರಪ್ಪ ರಾಜೀನಾಮೆ ಕೇಳಿದ್ದ ನೀವು ನಾಗೇಂದ್ರ ರಕ್ಷಣೆಗೆ ನಿಂತಿದ್ದೇಕೆ..? ಕೋಟಿ-ಕೋಟಿ ಹಣ ತೆಲಂಗಾಣ, ಚೆನ್ನೈಗೆ ಹೋಗಿದೆ ಎನ್ನುತ್ತಿದ್ದಾರೆ.ನಾವು ನಿಮ್ಮದು ದೆಹಲಿ ಕಾಂಗ್ರೆಸ್ನ ATM ಸರ್ಕಾರ ಎಂದಿದ್ದೆವು ಎಂದು ತಿಳಿಸಿದ್ದಾರೆ.
ಇನ್ನು ಆರೋಪ ಸಾಬೀತು ಮಾಡಿದ್ರೆ ರಾಜೀನಾಮೆ ಕೊಡ್ತೀವಿ ಅಂದಿದ್ರಿ. ವಾಲ್ಮೀಕಿ ನಿಗಮದ ಹಣ ಲೂಟಿಯಿಂದ ಇದು ಸಾಬೀತಾಗಿದೆ. ಈಗ ಕಾಂಗ್ರೆಸ್ ನಾಯಕರೇ ರಾಜೀನಾಮೆ ಕೊಡ್ತೀರಾ ? ರಾಹುಲ್ ಗಾಂಧಿ ಅವರ ಟಕಾಟಕ್ ವರ್ಗಾವಣೆ ಅಂದ್ರೆ ಇದೇನಾ. ಅಕ್ರಮದ ಹಣವನ್ನು ಟಕಾಟಕ್ ವರ್ಗಾವಣೆ ಮಾಡಿದ್ದೀರಾ ಎಂದು ಸಿದ್ದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸರಣಿ ಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್ಗೆ ಮೇಜರ್ ಟ್ವಿಸ್ಟ್ : ಚಂದ್ರಶೇಖರ್ ಮೇಲೆ ನೇರ ಒತ್ತಡ ಹೇರಿದ್ದ ಸಚಿವರು..!