ಬಾಗಲಕೋಟೆ : ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಹಗರಣ ಮಾಸುವ ಮುನ್ನವೇ ಇದೀಗ ಗಡಿಜಿಲ್ಲೆ ಬಾಗಲಕೋಟೆಯಲ್ಲಿ ಭ್ರೂಣಲಿಂಗ ಪತ್ತೆ ಹಗರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಗಲಕೋಟೆಯ ಮಹಾಲಿಂಗ ಆಸ್ಪತ್ರೆ ಮಾಜಿ ನರ್ಸ್ ವಿರುದ್ಧ ಅಬಾರ್ಷನ್ ದಂಧೆ ಆರೋಪ ಕೇಳಿ ಬಂದಿದ್ದು, ನರ್ಸ್ ಕವಿತಾ ಬದನ್ನನವರ್ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಮಹಾರಾಷ್ಟ್ರ ಕೊಲ್ಹಾಪುರ ಮೂಲದ ಗರ್ಭಿಣಿ ಮಹಿಳೆ ಮೀರಜ್ನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದರು. ಸ್ಕ್ಯಾನಿಂಗ್ ವೇಳೆ ಹೆಣ್ಣು ಮಗು ಇದೆ ಅಂತಾ ಗೊತ್ತಾಗಿ ಕವಿತಾರನ್ನು ಸಂಪರ್ಕಿಸಿದ್ದರು. ಇನ್ನು ನರ್ಸ್ ಕವಿತಾ ತನ್ನ ನಕಲಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಟ್ರೀಟ್ ಮಾಡಿದ್ದಾರೆ. 3ನೇಯದ್ದೂ ಹೆಣ್ಣು ಮಗು ಎಂದು ಗರ್ಭಪಾತ ಮಾಡಿಸಿಕೊಂಡು ಗರ್ಭಿಣಿ ಮಹಿಳೆ ಸೊನಾಲಿ ಕಾರ್ನಲ್ಲಿ ಹೋಗ್ತಿದ್ದಾಗ ಸಾವನ್ನಪ್ಪಿದ್ದಾಳೆ.
ನರ್ಸ್ ಕವಿತಾ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದ್ದು, ಈ ಹಿಂದೆಯೂ ಕವಿತಾ ವಿರುದ್ಧ ಗರ್ಭಪಾತ ವಿಚಾರದಲ್ಲೇ ಕೇಸ್ ದಾಖಲಾಗಿತ್ತು. ಪ್ರಕರಣದ ಸಂಬಂಧ ಸಾಂಗ್ಲಿ ಪೊಲೀಸರು ಸೊನಾಲಿ ಸಂಬಂಧಿ ವಿಜಯ್ ಗೌಲಿ, ಕವಿತಾ ಬದನ್ನವರ್ ಅರೆಸ್ಟ್ ಮಾಡಿದ್ದಾರೆ.
ಅಬಾರ್ಷನ್ಗೆ ಮಾರುತಿ ಕರವಾಡ ಎಂಬಾತ ಕೂಡ ಸಹಕರಿಸಿದ್ದ ಹಾಗೂ ಈಗಾಗಲೇ ಅರೆಸ್ಟ್ ಆಗಿರುವ ಸೊನಾಲಿ ಸಂಬಂಧಿ ವಿಜಯ್ ಗೌಲಿ, ಕವಿತಾ ವಿರುದ್ದIPC ಸೆಕ್ಷನ್ 312, 313, 314, 304, PC-PNDT ಆ್ಯಕ್ಟ್ 23ರಡಿ ಕೇಸ್ ದಾಖಲಾಗಿದೆ ಎಂದು ಪ್ರಕರಣದ ಬಗ್ಗೆ ಬಾಗಲಕೋಟೆ SP ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ನನ್ನು ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..!