Download Our App

Follow us

Home » ರಾಜಕೀಯ » ಪ್ರಜ್ವಲ್​ನನ್ನು​ ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..!

ಪ್ರಜ್ವಲ್​ನನ್ನು​ ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಏರ್​​ಪೋರ್ಟ್​ಗೆ ಬಂದ ಕೂಡಲೇ ಪ್ರಜ್ವಲ್​​ನನ್ನು​ ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ. ಈಗಾಗಲೇ ಪ್ರಜ್ವಲ್​ ವಿರುದ್ಧ ವಾರೆಂಟ್​ ಜಾರಿ ಆಗಿದೆ. ಪ್ರಜ್ವಲ್​​ ಅರೆಸ್ಟ್ ಮಾಡಿ ವಿಚಾರಣೆ ನಡೆಸಲೇಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಜ್ವಲ್​​ ರೇವಣ್ಣ ಬಂಧನದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, SITಯವರು ಪ್ರಜ್ವಲ್​ಗಾಗಿ ತಿಂಗಳಿನಿಂದ ಕಾಯ್ತಿದ್ದಾರೆ. ಅರೆಸ್ಟ್ ಮಾಡಿ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಬೇಕಿದೆ. ಎಸ್​ಐಟಿ ಅಧಿಕಾರಿಗಳು ವಿಚಾರಣೆ ಪ್ರೋಸೆಸ್​ ಶುರು ಮಾಡ್ತಾರೆ ಎಂದು ಹೇಳಿದ್ದಾರೆ.

ಇಂಥಾ ಪ್ರಕರಣದಲ್ಲಿ ಕಾಂಗ್ರೆಸ್, ಜೆಡಿಎಸ್​, ಬಿಜೆಪಿ ಅಂತಾ ನೋಡಲ್ಲ. ಯಾರೇ ತಪ್ಪು ಮಾಡಿದ್ದರೂ ತನಿಖೆ ಮಾಡಿ ಕ್ರಮ ಕೈಗೊಳ್ತಾರೆ. ಪ್ರಜ್ವಲ್​ ಕೇಸ್​ನಲ್ಲಿ ಈಗಾಗಲೇ 11 ಮಂದಿ ಅರೆಸ್ಟ್ ಆಗಿದೆ ಎಂದು ಬೆಂಗಳೂರಿನಲ್ಲಿ ಡಾ.ಜಿ.ಪರಮೇಶ್ವರ್​ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ವಾಲ್ಮೀಕಿ ನಿಗಮದ ಅಧಿಕಾರಿ ಸೂಸೈಡ್ ಕೇಸ್​ ಬಗ್ಗೆ ಪ್ರತಿಕ್ರಿಯಿಸಿದ  ಅವರು, ವಾಲ್ಮೀಕಿ ನಿಗಮದ ಹಣದ ವಿಚಾರದಲ್ಲಿ ತನಿಖೆ ಆಗುತ್ತಿದೆ. ಸಚಿವರೇ ಆಗಲಿ.. ಯಾರೇ ಆಗಲಿ ತಪ್ಪು ಮಾಡಿದ್ರೆ ಕ್ರಮ ಆಗುತ್ತೆ. ಸಿಐಡಿ ತನಿಖೆಯಲ್ಲಿ ಏನ್​​​ ಹೊರ ಬರುತ್ತೆ ನೋಡೋಣ ಎಂದಿದ್ದಾರೆ.

87 ಕೋಟಿ.. 97 ಕೋಟಿ ಅಂತೆಲ್ಲಾ ಹೇಳುತ್ತಿದ್ದಾರೆ. ಎಷ್ಟು ಕೋಟಿ ಹಣ ಬೇರೆ-ಬೇರೆ ಅಕೌಂಟ್​ಗಳಿಗೆ ಹೋಗಿದೆ ನೋಡ್ಬೇಕು. ಸಚಿವರು ಮೌಖಿಕ ಆದೇಶ ನೀಡಿದ್ರು ಅಂತಾ ಆರೋಪಿಸುತ್ತಿದ್ದಾರೆ.
ಈ ಎಲ್ಲಾ ಆರೋಪವೂ ತನಿಖೆಯಲ್ಲೇ ಗೊತ್ತಾಗಬೇಕು. ಬಿಜೆಪಿಯವರು ಘಟನೆಗೊಂದು ಸಚಿವರ ರಾಜೀನಾಮೆ ಕೇಳ್ತಾರೆ. ಅವತ್ತು ನೇರವಾಗಿ ಈಶ್ವರಪ್ಪ ಅವರ ಹೆಸರು ಬಂದಿತ್ತು. ಹೀಗಾಗಿ ನಾವು ಈಶ್ವರಪ್ಪ ರಾಜೀನಾಮೆಯನ್ನು ಕೇಳಿದ್ದೆವು. ಈಗ ಸಚಿವರ ಹೆಸರು ಎಲ್ಲೂ ಉಲ್ಲೇಖ ಮಾಡಿಲ್ಲ.ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿ ಎಂದ ಪರಮೇಶ್ವರ್​​ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮಾನಿಟರ್ ಲಿಝಾರ್ಡ್​ ಪ್ರಭೇದದ ಬೃಹತ್ ಹಲ್ಲಿ ಪತ್ತೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here