ಬೆಂಗಳೂರು : ಕೆ.ಆರ್ ನಗರದ ಸಂತ್ರಸ್ತೆಯೋರ್ವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ. ಬಂಧನದ ಭೀತಿಯಿಂದಾಗಿ ಭವಾನಿ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದು, ಇಂದು ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ.
ವಿಶೇಷ ಕೋರ್ಟ್ನಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದ್ದು, ಭವಾನಿ ರೇವಣ್ಣಗೆ ಜಾಮೀನು ನೀಡದಂತೆ SIT ಪರ ವಕೀಲರು ವಾದ ಮಂಡಿಸಲಿದ್ದಾರೆ. SIT ಪರ ವಕೀಲರು ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲಿದ್ದಾರೆ. ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಪ್ರಸ್ತಾಪವಾಗಿದ್ದು, ಭವಾನಿ ರೇವಣ್ಣ ಹೇಳಿ ಸಂತ್ರಸ್ತೆಯನ್ನು ಸತೀಶ್ಬಾಬು ಕರೆತಂದಿದ್ದ. ಸಂತ್ರಸ್ತೆ ದೂರು ಕೊಡಬಾರದೆಂದು ಆಪ್ತನ ಮೂಲಕ ಕರೆಸಿಕೊಂಡಿದ್ದಾರೆ.
ಭವಾನಿ ರೇವಣ್ಣ ಹೆಸರು ಹೇಳಿ ಬಲವಂತವಾಗಿ ಕರೆದೊಯ್ಯಲಾಗಿತ್ತು, ಕೆ.ಆರ್ ನಗರದ ತೋಟದ ಮನೆಯಲ್ಲಿ ಸಂತ್ರಸ್ತೆಯನ್ನು ಲಾಕ್ ಮಾಡಿದ್ದರು. ಈ ಪ್ರಕರಣದಲ್ಲಿ ಭವಾನಿ ರೇವಣ್ಣ ಪಾತ್ರದ ತನಿಖೆ ಆಗಬೇಕು, ಭವಾನಿ ರೇವಣ್ಣಗೆ ನೋಟಿಸ್ ನೀಡಿದ್ರು ವಿಚಾರಣೆಗೆ ಹಾಜರಾಗಿಲ್ಲ. ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು SPP ಆಕ್ಷೇಪಣೆ ವ್ಯಕ್ತಪಡಿಸಲಿದ್ದಾರೆ. ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾಗೊಂಡರೆ ಸಂಕಷ್ಟ ಗ್ಯಾರಂಟಿ. ಇದೇ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿ ಜೈಲು ಸೇರಿದ್ದರು. 7 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದು ಬೇಲ್ ಮೇಲೆ ಹೊರಬಂದ್ರು, ಈಗ ರೇವಣ್ಣ ಪತ್ನಿ ಭವಾನಿಗೆ ಇದೇ ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದೆ.
ಇದನ್ನೂ ಓದಿ : ಬೆಂಗಳೂರು : MAAZA ಸಾಫ್ಟ್ ಡ್ರಿಂಕ್ಸ್ ಸೇವಿಸಿ ಮಗು ಅಸ್ವಸ್ಥಗೊಂಡ ಆರೋಪ – ವಿಡಿಯೋ ವೈರಲ್..!