ಬಾಗಲಕೋಟೆಯ : ಬಾಗಲಕೋಟೆಯ ಅಮೀನಗಢ ಡಿಸಿಸಿ ಬ್ಯಾಂಕ್ ವಿರುದ್ಧ ನೂರಾರು ರೈತರು ಹಾಗೂ ಗ್ರಾಹಕರು ಪ್ರೊಟೆಸ್ಟ್ ನಡೆಸಿದ್ದಾರೆ. ಬ್ಯಾಂಕ್ನಲ್ಲಿ 12 ಕೋಟಿ ವಂಚನೆ ನಡೆದಿದೆ ಎಂದು ಆರೋಪ ಕೇಳಿಬಂದಿದ್ದು, ಅಮೀನಗಡ ಡಿಸಿಸಿ ಬ್ಯಾಂಕ್ ಶಾಖೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಕಳೆದ 3 ವರ್ಷದ ಹಿಂದೆ ಕ್ಲರ್ಕ್ ಪ್ರವೀಣ ಪತ್ರಿ ಎಂಬುವನಿಂದ ವಂಚನೆ ನಡೆದಿದ್ದು, ಆತ ವಿವಿಧ ಶಾಖೆಗಳ ಬ್ಯಾಂಕ್ ಮ್ಯಾನೇಜರ್ಗಳ ಐಡಿ ಪಾಸ್ವರ್ಡ್ ಬಳಸಿ ವಂಚನೆ ಮಾಡಿದ್ದಾನೆ. ವಿವಿಧ ಅಕೌಂಟ್ಗಳಿಂದ ಕೋಟಿ-ಕೋಟಿ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ಡಿಸಿಸಿ ಬ್ಯಾಂಕ್ ಉಳಿತಾಯ ಖಾತೆ ದುರ್ಬಳಕೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಗ್ರಾಹಕರು, ರೈತರಿಗೆ ಅನ್ಯಾಯವಾಗಿದೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಸಿಐಡಿ ಅಧಿಕಾರಿಗಳು ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬ್ಯಾಂಕ್ ಆಡಳಿತ ಮಂಡಳಿ, ಖಾತೆದಾರರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಪ್ರವೀಣ ಪತ್ರಿ ಸಿನಿಮಾ ಅಲ್ಬಂ ನಿರ್ಮಾಣ, ಹೆಲಿಕಾಪ್ಟರ್ನಲ್ಲಿ ಸುತ್ತಾಡಿದ್ದ.
ಇದನ್ನೂ ಓದಿ : ಯಾದಗಿರಿ : ಹೋಟೆಲ್ನ ಮಿನರಲ್ ವಾಟರ್ ಬಾಟಲ್ನಲ್ಲಿ ಜೇಡ ಪತ್ತೆ..!