ಹುಬ್ಬಳ್ಳಿ : ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಆರೋಪಿ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದು ಸಿಐಡಿ ಅಧಿಕಾರಿಗಳು ಕೋರ್ಟ್ ಮುಂದೆ ಪಡಿಸಿದ್ದಾರೆ.
ಸಿಐಡಿ ಅಧಿಕಾರಿಗಳು ವಿಶ್ವ ಅಲಿಯಾಸ್ ಗಿರೀಶ್ನನ್ನು ಕೋರ್ಟ್ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ 15 ದಿನ ಕಸ್ಟಡಿಗೆ ಕೊಡುವಂತೆ ಕೇಳಿದ್ದಾರೆ. ಜಡ್ಜ್ ಮುಂದೆ ಹಾಜರಾಗುವಾಗ ಆರೋಪಿ ವಿಶ್ವ ಕಣ್ಣೀರು ಹಾಕಿದ್ದಾನೆ. ಜಡ್ಜ್ ಮುಂದೆ ಕರೆತರುತ್ತಿದ್ದಂತೆ ಕೈ ಮುಗಿದು ಕಣ್ಣೀರು ಹಾಕಿರುವ ವಿಶ್ವನ್ನು ತರಾಟೆಗೆ ತೆಗೆದುಕೊಂಡ ಹುಬ್ಬಳ್ಳಿ ಕೋರ್ಟ್ ನ್ಯಾಯಾಧೀಶರು ಹೀನ ಕೃತ್ಯ ಮಾಡುವ ಮೊದ್ಲು ಈ ಕಣ್ಣೀರು ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆರೋಪಿಯನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಇನ್ನು ವಿಶ್ವ ಅಲಿಯಾಸ್ ಗಿರೀಶ್ನನ್ನು ವಿಚಾರಣೆ ಮಾಡಲಿರುವ ಸಿಐಡಿ ಅಧಿಕಾರಿಗಳು, ಅಂಜಲಿ ಮತ್ತು ವಿಶ್ವನಿಗೆ ಎಷ್ಟು ದಿನಗಳ ಪರಿಚಯ ಇತ್ತು. ಇಬ್ಬರ ನಡುವೆ ಪರಸ್ಪರ ಪ್ರೀತಿ ಆರಂಭ ಆಗಿದ್ದು ಹೇಗೆ. ಇವರಿಬ್ಬರು ಎಲ್ಲೆಲ್ಲಿ ಸುತ್ತಾಡಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದೇಕೆ. ಅಂಜಲಿ-ವಿಶ್ವ ಮೈಸೂರಿನ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಮಾಹಿತಿ. ಈ ಎಲ್ಲಾ ಅಂಶಗಳನ್ನು ವಿಚಾರಣೆ ವೇಳೆ ಸಿಐಡಿ ಟೀಂ ಕಲೆ ಹಾಕಲಿದೆ.
ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ..!