ಲಕ್ನೋ: ಶ್ರೀರಾಮ ಮಂದಿರ ಭಾರತದ ಜಾತ್ಯತೀತ ಸೌಂದರ್ಯಕ್ಕೂ ಸಾಕ್ಷಿಯಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಹಲವು ಮುಸ್ಲಿಮರು ಜಾತ್ಯತೀತ ತತ್ವದ ಸಂದೇಶವನ್ನು ಜಗತ್ತಿಗೆ ಸಾರುತ್ತಿದ್ದಾರೆ.
ಅಯೋಧ್ಯೆಯಿಂದ ತಮಗಾಗಿ ಬಂದ ರಾಮನ ಅಕ್ಷತೆ, ರಾಮಮಂದಿರ ಫೋಟೋ ಮತ್ತು ಪ್ರತಿಷ್ಠಾಪನೆಯ ಆಮಂತ್ರಣ ಪತ್ರ ಕಂಡು ಕರಸೇವಕರಾದ 70 ವರ್ಷದ ಮೊಹಮ್ಮದ್ ಹಬೀಬ್ ಭಾವುಕರಾಗಿದ್ದಾರೆ. “ಕರಸೇವಕರೊಂದಿಗೆ 1992ರ ಡಿ.2ರಂದು ಅಯೋಧ್ಯೆಗೆ ತೆರಳಿದ್ದೆ. ಅಲ್ಲಿಯೇ 4-5 ದಿನಗಳು ತಂಗಿದ್ದೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಹಬೀಬ್ ಹೇಳಿದ್ದಾರೆ.
ಇಷ್ಟು ದಿನಗಳ ಹೋರಾಟ ಮತ್ತು ತಪಸ್ಸಿನ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಿದೆ. ಇದರಿಂದ ತುಂಬ ಸಂತೋಷವಾಗುತ್ತಿದೆ. ಶ್ರೀರಾಮ ನಮ್ಮ ಪೂರ್ವಜ. ನಮ್ಮ ಪೂರ್ವ ಜನರನ್ನು ನೆನೆಯುವುದೇ ಭಾರತೀಯತೆ’ ಎಂದು ಹಬೀಬ್ ಅಭಿಪ್ರಾಯಪಟ್ಟಿದ್ದಾರೆ.
Btv news desk
ಇದನ್ನೂ ಓದಿ : ಅದಾನಿ ಮತ್ತೆ ಏಷ್ಯಾದ ನಂಬರ್ 1 ಶ್ರೀಮಂತ..
Post Views: 1,682