ಬೆಂಗಳೂರು : ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಪ್ರತಿ ವರ್ಷ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಸಿಟಿ ರೌಂಡ್ಸ್ ಕೈಗೊಂಡಿದ್ದು, ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಟಿ ರೌಂಡ್ಸ್ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲಿಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ರಾಜಕಾಲುವೆ ಪರಿಶೀಲನೆ ನಡೆಸಿದ್ದು, ಬಳಿಕ ನಾಯಂಡಹಳ್ಳಿ ಜಂಕ್ಷನ್ ಬಳಿಕ ರಸ್ತೆ ರಸ್ತೆ ಕಾಮಗಾರಿ, ಬಿಟಿಎಂ ಲೇಔಟ್ನ ಡಬಲ್ ಡೆಕ್ಕರ್ ಬ್ರಿಡ್ಜ್ ಪರಿಶೀಲನೆ ಮಾಡಿದ್ದಾರೆ.
ಇನ್ನು ಬ್ರಿಡ್ಜ್ ಬಳಿ ಒಣಗಿದ ಮರ ಬಿಟ್ಟಿದ್ದಕ್ಕೆ ಸಿಎಂ ಗರಂ ಆಗಿದ್ದು, ಒಣ ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಕೋಡಿ ಚಿಕ್ಕನಹಳ್ಳಿಯ ಅನುಗ್ರಹ ಬಡಾವಣೆ ರಾಜಕಾಲುವೆ ಪರಿಶೀಲನೆ ಮಾಡಿದ್ದಾರೆ. ಪದೇ-ಪದೇ ಅನುಗ್ರಹ ಲೇಔಟ್ಗೆ ನೀರು ನುಗ್ಗಿ ಅನಾಹುತ ಆಗ್ತಿತ್ತು. ಅನುಗ್ರಹ ಲೇಔಟ್ಗೆ ಸಿಎಂ ಬಂದಾಗ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಸಾಥ್ ನೀಡಿದ್ದಾರೆ.
ಸಿಲ್ಕ್ ಬೋರ್ಡ್ನ ಮೆಟ್ರೋ ಸ್ಟೇಷನ್, ಹೊರ ವರ್ತುಲ ರಸ್ತೆಯ ವೇಗಾ ಸಿಟಿ ಮಾಲ್ ಜಂಕ್ಷನ್, ಹೊಸೂರು ರೋಡ್, ಕೇಂದ್ರ ಸಿಲ್ಕ್ ಜಂಕ್ಷನ್, HSR ಬಡಾವಣೆ ಹಾಗೂ ಬೆಳ್ಳಂದೂರು ಸೇತುವೆ ಸೇರಿ ಹಲವೆಡೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಎಮ ಸಿದ್ದರಾಮಯ್ಯ ಅವರಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್,ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್ ಸೇರಿ ಹಲವರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ಪುಸ್ತಕ ರೂಪ ಪಡೆದ ಡೇರ್ ಡೆವಿಲ್ ಮುಸ್ತಾಫಾ ಚಿತ್ರ..!