Download Our App

Follow us

Home » ಜಿಲ್ಲೆ » ಅಪಘಾತವಾಗಿದ್ದ ಕಾರನ್ನು ಬೇರೆಡೆ ಎಳೆದೊಯ್ಯುವಾಗ ಅವಘಡ – ಇದ್ದಕಿದ್ದಂತೆ ರಸ್ತೆ ಮಧ್ಯೆ ಆಗಿದ್ದೇನು?

ಅಪಘಾತವಾಗಿದ್ದ ಕಾರನ್ನು ಬೇರೆಡೆ ಎಳೆದೊಯ್ಯುವಾಗ ಅವಘಡ – ಇದ್ದಕಿದ್ದಂತೆ ರಸ್ತೆ ಮಧ್ಯೆ ಆಗಿದ್ದೇನು?

ಚಿಕ್ಕಮಗಳೂರು : ರಸ್ತೆ ಮಧ್ಯೆ ಕಾರೊಂದು ಧಗ ಧಗನೆ ಹೊತ್ತಿ ಉರಿದ ಘಟನೆ ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ಬಳಿ ನಡೆದಿದೆ. ಅಪಘಾತವಾಗಿದ್ದ ಕಾರನ್ನ ಬೇರೆಡೆ ಎಳೆದೊಯ್ಯುವಾಗ ಈ  ಅವಘಡ ಸಂಭವಿಸಿದೆ.

ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ಕಾರು ರಸ್ತೆ ಬದಿ ಇದ್ದ ಟಿಂಬರ್ ಮರದ ರಾಶಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ರಾತ್ರಿ ಘಟನೆ ನಡೆದ ಸ್ಥಳದಿಂದ ಕಾರನ್ನು ತುಸು ದೂರಕ್ಕೆ ಎಳೆಯುತ್ತಿದ್ದಂತೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ.

ಅಪಘಾತವಾದ ಕಾರನ್ನ ಮತ್ತೊಂದು ವಾಹನದಲ್ಲಿ ಮಂಗಳೂರಿಗೆ ಎಳೆದೊಯ್ಯುತ್ತಿದ್ದರು. ಈ ವೇಳೆ ಕಾರಿಗೆ ಇದ್ದಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ರಸ್ತೆ ಮಧ್ಯೆ ಕಾರು ಧಗ-ಧಗನೆ ಉರಿದು ಸಂಪೂರ್ಣ ಭಸ್ಮವಾಗಿದೆ. ಕಳಸ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ – 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ..!

 

 

 

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here