ಬೆಂಗಳೂರು : ಪೆನ್ಡ್ರೈವ್ ಪ್ರಕರಣಕ್ಕೂ ಡಿಕೆಶಿಗೂ ಸಂಬಂಧ ಇಲ್ಲ. ಡಿಸಿಎಂ ಡಿಕೆ ಶಿವಕುಮಾರ್ಗೆ ಎಳ್ಳಷ್ಟೂ ಗೊತ್ತಿಲ್ಲ. ದೇವರಾಜೇಗೌಡಗೂ ಡಿಕೆಶಿಗೂ ಸಂಬಂಧ ಇಲ್ಲ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಪಾತ್ರ ಕೂಡ ಇದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ಅವರು, ಈ ಪ್ರಕರಣ ಡೈವರ್ಟ್ ಮಾಡಲು ಯತ್ನ ನಡೆದಿದೆ. ಮೊದಲು MLC ಆಫರ್.. ಈಗ 100 ವಿಚಾರ ಹೇಳ್ತಾರೆ. ದೇವರಾಜೇಗೌಡ ಮಾತುಗಳಲ್ಲೇ ಗೊಂದಲ ಇದೆ ಎಂದಿದ್ದಾರೆ.
1 ವರ್ಷ ದೇವರಾಜೇಗೌಡ ಪೆನ್ಡ್ರೈವ್ ಯಾಕೆ ಇಟ್ಕೊಂಡಿದ್ರು. ದೇವರಾಜೇಗೌಡ ಹೇಳಿಕೆ ಹಿಂದೆ ಹುನ್ನಾರ ಕಾಣ್ತಿದೆ. ಕೇಸ್ ಡೈವರ್ಟ್ ಮಾಡಲು JDS ಡಿಕೆಶಿ ಹೆಸರು ಬಳಸ್ತಿದೆ. ಇನ್ನು ಪ್ರಜ್ವಲ್ ವಾಪಸ್ ಕರೆಸುವ ಕೆಲಸ ಕುಟುಂಬ ಮಾಡ್ಬೇಕು. ಸರೆಂಡರ್ ಆಗುವಂತೆ ಪ್ರಜ್ವಲ್ಗೆ ಕುಟುಂಬ ಹೇಳಲಿ. ಅಂತಹ ಕೃತ್ಯ ಮಾಡಿದಲ್ಲದೆ ರೆಕಾರ್ಡ್ ಬೇರೆ ಮಾಡಿದ್ದಾರೆ.ರೇವಣ್ಣಅವ್ರು ದೇವೇಗೌಡರ ಫ್ಯಾಮಿಲಿ ಅಲ್ವಾ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಬೆಂಗಳೂರು : 40 ಅಡಿ ಎತ್ತರದ ಫ್ಲೈ ಓವರ್ ಮೇಲೆ ಭಯಾನಕ ಅಪಘಾತ – ತಪ್ಪಿದ ಭಾರೀ ದುರಂತ..!