ತುಮಕೂರು : ರೌಡಿಶೀಟರ್ ಮನೋಜ್ ಅಲಿಯಾಸ್ ಮಂಡೇಲಾ ಕಾಲಿಗೆ ಪೊಲೀಸರು ಗುಂಡೇಟು ಹಾರಿಸಿ ಬಂಧಿಸಿದ್ಧಾರೆ. ತುಮಕೂರು ತಾಲ್ಲೂಕಿ ಒಕ್ಕೋಡಿ ಬಳಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಿದ್ಧಾರೆ.
ಬೆಳಗ್ಗೆ ಬಂಡೆ ನಾಗನ ಮೇಲೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ್ದರು. ಬಂಡೆನಾಗ ತಪ್ಪಸಿಕೊಂಡು ಜೀವ ಉಳಿಕೊಂಡಿದ್ದನು. ಬಳಿಕ ಕೊಲೆ ಯತ್ನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೋಜ್ ಗಾಗಿ ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಮನೋಜ್ ನನ್ನ ಬಂಧಿಸಲು ಹೆಗ್ಗೆರೆ ಬಳಿ ವಕ್ಕೋಡಿಯಲ್ಲಿ ತಲೆ ಮರೆಸಿಕೊಂಡಿರುವುದು ತಿಳಿದು ಬಂದಿದೆ. ಫೋನ್ ಕಾಲ್ ಟ್ರಾಫಿಂಗ್ ಆಧಾರದ ಮೇಲೆ ಮನೋಜ್ ಇರುವ ಸ್ಥಳ ಪತ್ತೆಯಾಗಿದ್ದು, ಮನೋಜ್ ಬಂಧನಕ್ಕೆ ತೆರಳಿದ್ದ ವೇಳೆ ಹೆಡ್ ಕಾನ್ಸಸ್ಟೆಬಲ್ ಮೇಲೆ ಮನೋಜ್ ಮಚ್ಚು ಬೀಸಿ ಹಲ್ಲೆ ನಡೆಸಿದ್ಧಾನೆ.
ಹೆಡ್ ಕಾನ್ಸಸ್ಟೆಬಲ್ ಗೆ ಕೈಗೆ ಗಾಯವಾದ್ದು., ಈ ವೇಳೆ ಪೊಲೀಸರು ರೌಡಿಶೀಟರ್ ಮನೋಜ್ ಅಲಿಯಾಸ್ ಮಂಡೇಲಾ ಕಾಲಿಗೆ ಪೊಲೀಸರು ಗುಂಡೇಟು ಹಾರಿಸಿ, ಬಂಧಿಸಿದ್ಧಾರೆ. ಪ್ರಾಣ ಉಳಿಸಿಕೊಳ್ಳಲು ಪೊಲೀಸರಿಂದ ಫೈರಿಂಗ್ ಮಾಡಿದ್ದು, ರೌಡಿಶೀಟರ್ ಮನೋಜ್ಗೆ ತುಮಕೂರು ಜಿಲ್ಲಾ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ – ಅಂತಿಮ ಕಕ್ಷೆ ಸೇರಿದ ಆದಿತ್ಯ ಎಲ್-1..!