ದೆಹಲಿ : ಐವತ್ತು ದಿನದ ಬಳಿಕ ಜೈಲಿನಿಂದ ವಾಪಸ್ ಆಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ದೆಹಲಿಯ ಅರವಿಂದ್ ಕೇಜ್ರಿವಾಲ್ ಮನೆಯನ್ನು ಹೂವಿನಿಂದ ಸಿಂಗಾರ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಪಟಾಕಿ ಸಿಡಿಸಿ, ಜೈಕಾರ ಕೂಗಿದ್ರು.
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದರು. ನಿನ್ನೆ ಎಲೆಕ್ಷನ್ ಪ್ರಚಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಸುಪ್ರೀಂಕೋರ್ಟ್ 21 ದಿನಗಳ ಮಧ್ಯಂತರ ಬೇಲ್ ನೀಡಿತ್ತು. ಜೂನ್2ರ ನಂತರ ಕೋರ್ಟ್ ಮುಂದೆ ಸರೆಂಡರ್ ಆಗುವಂತೆ ಕೋರ್ಟ್ ಸೂಚಿಸಿದೆ.
ಜೈಲಿನಿಂದ ಹೊರಬಂದ ನಂತರ ಕೇಜ್ರಿವಾಲ್ ಮಾತನಾಡಿ, ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಾನು ಸರ್ವಾಧಿಕಾರದ ವಿರುದ್ಧ ನನ್ನ ಸಂಪೂರ್ಣ ಶಕ್ತಿಯಿಂದ ಹೋರಾಡುತ್ತಿದ್ದೇನೆ. ಆದರೆ 140 ಕೋಟಿ ಭಾರತೀಯರು ಸಹ ಹೋರಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಕ್ಷಯ ತೃತೀಯಕ್ಕೆ ಈ ಬಾರಿಯೂ ಭರ್ಜರಿ ಗೋಲ್ಡ್ ಸೇಲ್ : ರಾಜ್ಯದಲ್ಲಿ 2050 ಕೆ.ಜಿ ಚಿನ್ನ ಮಾರಾಟ..!