ಮೈಸೂರು : CBI ಅಂದ್ರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಂದಿದ್ದು ಯಾರು..? ಗೌಡರೇ CBI ಅನ್ನು ಚೋರ್ ಬಚಾವೋ ಇನ್ವೆಸ್ಟಿಗೇಷನ್ ಅಂದಿರಲಿಲ್ಲವೇ..? CBIಗೆ ಕೊಟ್ಟ ಕೇಸ್ಗಳಲ್ಲಿ ಯಾರಿಗೆ ಶಿಕ್ಷೆ ಆಯ್ತು..? ಡಿ.ಕೆ.ರವಿ ಕೇಸ್, ಕೆ.ಜೆ.ಜಾರ್ಜ್ ಕೇಸ್, ಲಾಟರಿ ಕೇಸ್ ಗತಿ ಏನಾಯ್ತು..? ನಮ್ಮ ಪೊಲೀಸರ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಟ್ಟಿದ್ರಾ..? CBIಗೆ ಕೊಡಿ ಅಂತಾ ಕೇಳ್ತಿರೋದ್ರ ಹಿಂದೆ ಬೇರೆ ಉದ್ದೇಶ ಇದೆ, ನಾನು ಯಾವತ್ತು ಪೊಲೀಸರಿಗೆ ಕಾನೂನು ಮೀರಿ ನಡೆದುಕೊಳ್ಳಿ ಎಂದಿಲ್ಲ. SITಯಲ್ಲಿರೋದು ನಮ್ಮ ಪೊಲೀಸರೇ ಅಲ್ಲವೇ, ಅವರ ಮೇಲೆ ನಂಬಿಕೆ ಇಲ್ವಾ..? ಎಂದು ಬಿಜೆಪಿ, ಜೆಡಿಎಸ್ಗೆ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ರಾಜಕೀಯ ಪಿತೂರಿ ಎಂದಿದ್ದ ಮಾಜಿ ಸಿಎಂ ಹೆಚ್ಡಿಕೆಗೆ ಸಿಎಂ ಸಿದ್ದು ತಿರುಗೇಟು ನೀಡಿದ್ದಾರೆ. ಕೇಸ್ ಇಲ್ಲ ಅಂದ್ಮೇಲೆ ಬೇಲ್ಗೆ ಅರ್ಜಿ ಹಾಕಿದ್ಯಾಕೆ..? ತಪ್ಪೇ ಮಾಡಿಲ್ಲ ಅಂದ್ಮೇಲೆ ನಿರೀಕ್ಷಣಾ ಬೇಲ್ ಯಾಕೆ ಸಿಗಲಿಲ್ಲ..? ಇದರಲ್ಲಿ ರಾಜಕೀಯ ಎಲ್ಲಿಂದ ಬಂತು..? ಈ ಕೇಸ್ನಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ಇಲ್ಲವೇ ಇಲ್ಲ ಎಂದಿದ್ದಾರೆ.
ಕೇಸ್ಗೆ ಅಂತರಾಷ್ಟ್ರೀಯ ಸಂಪರ್ಕವಿದೆ ಅನ್ನೋದೆಲ್ಲಾ ಸುಳ್ಳು, ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ. ಪ್ರಕರಣದ ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ, ಜೆಡಿಎಸ್, ಬಿಜೆಪಿ ರಾಜಕೀಯ ಪ್ರೇರಿತ ಆರೋಪ ಮಾಡ್ತಿವೆ. SIT ಪೊಲೀಸರು ಮೊದಲು ತನಿಖೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆ-ಮನದ ಡೊಂಕು ಸರಿಮಾಡಿಕೊಳ್ಳಿ : HDKಗೆ ಡಿಕೆಶಿ ಟಾಂಗ್..!