ಬೆಂಗಳೂರು : ಮುಖ್ಯಮಂತ್ರಿಗಳೇ ಡಿಸಿಎಂ ಡಿಕೆಶಿಯನ್ನು ವಜಾ ಮಾಡಿ, ಪೆನ್ಡ್ರೈವ್ ಲೀಕ್ ಮಾಡಿಸಿರೋದೇ ನಿಮ್ಮ ಡಿಸಿಎಂ. ನಿಮಗೆ ನೈತಿಕತೆ ಇದ್ದರೆ ಡಿಕೆಶಿಯನ್ನು ಸಂಪುಟದಿಂದ ಕೈಬಿಡಿ ಎಂದು ಮಾಜಿ ಸಿಎಂ ಹೆಚ್ಡಿಕೆ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಕಾರ್ತಿಕ್ ಗೌಡನನ್ನು ವಿದೇಶಕ್ಕೆ ಕಳಿಸಿದ್ದು ಯಾರು..? ಬೆಂಗಳೂರಿನಲ್ಲಿ ದೂರು ಬರೆಸಿಕೊಂಡಿದ್ದು ಯಾರು..? ಸಂತ್ರಸ್ತೆಯರಿಗೆ ದೂರು ಕೊಡಲು ಹಣ ಕೊಟ್ಟವರು ಯಾರು..? ಮಹಾನ್ ನಾಯಕನ ಕೈವಾಡ ಇಲ್ಲದೇ ಇದೆಲ್ಲಾ ಆಗಿಲ್ಲ..? ಈ ಹಿಂದೆ ಜಾರಕಿಹೊಳಿ ಕೇಸ್ನಲ್ಲೂ ಇದೇ ನಾಯಕ ಇದ್ರು. ನಮ್ಮ ಕುಟುಂಬ ಸರ್ವನಾಶ ಮಾಡಲು ನಿಮ್ಮ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿ, SIT ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ, CBI ತನಿಖೆಗೆ ಕೊಡಲು ನಿಮಗೂ ಮನಸ್ಸಿಲ್ಲ. ಪೆನ್ಡ್ರೈವ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ. SIT ಕೇವಲ ಪ್ರಜ್ವಲ್, ಹೆಚ್.ಡಿ.ರೇವಣ್ಣ ಕೇಸ್ ತನಿಖೆ ಮಾಡ್ತಿದೆಯಾ..? ಪೆನ್ಡ್ರೈವ್ ಲೀಕ್ ಮಾಡಿದವರ ವಿರುದ್ಧ ಯಾಕೆ ತನಿಖೆ ಮಾಡ್ತಿಲ್ಲ..?ಹಾಸನದಲ್ಲಿ ನವೀನ್ಗೌಡ ಸೇರಿ ಐವರು ಮೇಲೆ ದೂರು ದಾಖಲಾಗಿದೆ. ಆ ಐವರ ಕೇಸನ್ನು ಯಾಕೆ SITಗೆ ವರ್ಗಾವಣೆ ಮಾಡಿಲ್ಲ, ಕಾರ್ತಿಕ್ಗೌಡ ಎಲ್ಲಿದ್ದಾನೆ..? SIT ಕಾರ್ತಿಕ್ನನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಹೆಚ್ಡಿಕೆ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಹಾಗೆಯೇ, ಪೆನ್ಡ್ರೈವ್ ಬಗ್ಗೆ ನನಗೆ ಪ್ರಜ್ವಲ್ಗೆ ಗೊತ್ತಿದ್ರೆ ಟಿಕೆಟ್ ಕೊಡ್ತಿರಲಿಲ್ಲ, ದೇವೇಗೌಡರೇ ಹೇಳಿದ್ರೂ ಹಾಸನದಿಂದ ನಿಲ್ಲಿಸುತ್ತಿರಲಿಲ್ಲ. ಪೆನ್ಡ್ರೈವ್ ನಾನು ನೋಡಿಲ್ಲ. ನೋಡೋ ಆಸಕ್ತಿಯೂ ಇಲ್ಲ, ಈ ಸರ್ಕಾರಕ್ಕೆ ನಮ್ಮ ಪೋಲ್ ಏಜೆಂಟ್ ದೂರು ಕೊಟ್ಟಿರಲಿಲ್ಲವೇ..? ಆಗಲೇ ಯಾಕೆ ನವೀನ್ಗೌಡ ಸೇರಿ ಐವರನ್ನು ಅರೆಸ್ಟ್ ಮಾಡಲಿಲ್ಲ. ಈ ಸರ್ಕಾರಕ್ಕೆ ಸಂತ್ರಸ್ತೆಯರ ರಕ್ಷಣೆ ಬೇಕಾಗಿರಲಿಲ್ಲ, ದೇವೇಗೌಡರ ಕುಟುಂಬವನ್ನು ಮುಗಿಸುವ ಹುನ್ನಾರ ಇತ್ತು..? ದೇವರಾಜೇಗೌಡ ನನಗೆ ಪೆನ್ಡ್ರೈವ್ ತಂದು ಕೊಟ್ಟಿಲ್ಲ. ನನಗೆ ಪೆನ್ಡ್ರೈವ್ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪೆನ್ಡ್ರೈವ್ ಕೇಸ್ : ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಪ್ರತಿಭಟನೆ..!