ಬೆಂಗಳೂರು : ಪ್ರಜ್ವಲ್ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ ರೇವಣ್ಣ ವಿರುದ್ದ ದೂರು ದಾಖಲಾಗಿದೆ. ಇದೀಗ ಪತಿ-ಪುತ್ರನ ಸಾಲು-ಸಾಲು ಕೇಸ್ನಿಂದ ಭವಾನಿ ರೇವಣ್ಣಗೆ ಕಂಟಕ ಶುರುವಾಗಿದೆ.
ಪೊಲೀಸ್ ರಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಭವಾನಿ ರೇವಣ್ಣರ ಹೆಸರು ಉಲ್ಲೇಖವಾಗಿದೆ. ಸಂತ್ರಸ್ತೆಯರು ಎರಡು ಕೇಸ್ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ್ದರಿಂದ ಭವಾನಿ ರೇವಣ್ಣಗೂ ವಿಚಾರಣೆ ಸಂಕಷ್ಟ ಎದುರಾಗಿದೆ.
ಸಂತ್ರಸ್ತೆಯರು ನೀಡಿರುವ ದೂರಿನಲ್ಲಿ ಭವಾನಿ ರೇವಣ್ಣ ಕರೆದ್ರು ಅಂತಾ ಹೇಳಿಯೇ ಕಿಡ್ನಾಪ್ ಮಾಡಿರೋ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಭವಾನಿ ರೇವಣ್ಣಗೆ SIT ನೋಟಿಸ್ ಕೊಟ್ಟು ಮಾಹಿತಿ ಪಡೆದುಕೊಂಡಿದೆ. ತನಿಖೆ ವೇಳೆ ಭವಾನಿ ರೇವಣ್ಣರ ವಿರುದ್ಧ ಎವಿಡೆನ್ಸ್ ಸಿಕ್ಕರೆ ವಿಚಾರಣೆ ಸಂಕಷ್ಟ ಎದುರಾಗಲಿದೆ. ಈ ಎಲ್ಲವನ್ನೂ ಗಮನಿಸಿದಾಗ ಸಂಬಂಧಿ ಸತೀಶ್ ಬಾಬು ಹೇಳಿಕೆಯೇ ಭವಾನಿ ರೇವಣ್ಣಗೆ ಮುಳುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಜಾರ್ಖಂಡ್ ಸಚಿವನ ಆಪ್ತನ ಮನೆ ಮೇಲೆ ಇಡಿ ರೇಡ್ : ರಾಶಿ ರಾಶಿ ಹಣ ಪತ್ತೆ..!