ಮಂಗಳೂರು : ಸಂಸದ ಪ್ರಜ್ಚಲ್ ರೇವಣ್ಣ ಇಂದು ಮಂಗಳೂರು ಏರ್ಪೋರ್ಟ್ಗೆ ಆಗಮಿಸುವ ಸಾಧ್ಯತೆಯಿದೆ. ಅಪ್ಪ ಅರೆಸ್ಟ್ ಆದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ರಿಟರ್ನ್ ಆಗುವ ಸಾಧ್ಯತೆಗಳಿವೆ. ಮಂಗಳೂರು ಏರ್ಪೋರ್ಟ್ಗೆ ಅಬುದಾಬಿ, ದುಬೈ, ಕುವೈತ್ನಿಂದ ಸಂಜೆವರೆಗ 4 ವಿಮಾನ ಬರಲಿವೆ. ಈ ನಾಲ್ಕು ವಿಮಾನಗಳಲ್ಲಿ ಒಂದರಲ್ಲಿ ಪ್ರಜ್ವಲ್ ಬರುವ ಸಾಧ್ಯತೆಯಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿದ್ದು, ಏರ್ಪೋರ್ಟ್ ಇಮಿಗ್ರೇಷನ್ ಬಳಿಯೇ ಪ್ರಜ್ವಲ್ನನ್ನು ಬಂಧಿಸುವ ಸಾಧ್ಯತೆಯಿದೆ. ಈಗಷ್ಟೇ ಅಬುದಾಬಿಯಿಂದ ಲ್ಯಾಂಡ್ ಆದ ವಿಮಾನದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಆಗಮಿಸಲಿಲ್ಲ. ಇಂದು ಭಾರತಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆಯಿದೆ. ಕೊಚ್ಚಿ, ಗೋವಾ, ಬೆಂಗಳೂರು ಏರ್ಪೋರ್ಟ್ಗಳ ಮೇಲೂ SIT ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಯಾವುದಾದರು 4 ವಿಮಾನ ನಿಲ್ದಾಣಕ್ಕೆ ಬರೋ ಸಾಧ್ಯತೆಯಿದ್ದು, ಯಾವುದೇ ಏರ್ಪೋರ್ಟ್ ಗೂ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರು ಪಡಿಸಲಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿ, ನಂತರ ಬೆಂಗಳೂರಿಗೆ ಶಿಫ್ಟ್ ಮಾಡಲಿದ್ದಾರೆ.
ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಪ್ರಕರಣ : SIT ಮುಂದೆ ಹೆಚ್.ಡಿ ರೇವಣ್ಣ ಹೇಳಿದ್ದೇನು..?