ಬೆಂಗಳೂರು : ಸಂತ್ರಸ್ತೆ ಕಿಡ್ನಾಪ್ ಸಂಬಂಧ SIT ಅಧಿಕಾರಿಗಳು ರೇವಣ್ಣನನ್ನು ವಿಚಾರಣೆ ಮಾಡಿದ್ದಾರೆ. SIT ಮುಖ್ಯಸ್ಥ ಬಿ.ಕೆ.ಸಿಂಗ್ ಹಾಗೂ ತಂಡದಿಂದ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ನಾವು ಯಾವುದೇ ಕಾರಣಕ್ಕೂ ಆಕೆಯನ್ನ ಕಿಡ್ನಾಪ್ ಮಾಡಿಲ್ಲ, ಎಲೆಕ್ಷನ್ ಇರುವ ಕಾರಣಕ್ಕೆ ಆಕೆ ನಮ್ಮ ಮನೆಗೆ ಬಂದಿದ್ದರು. ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲೇ ಕೆಲಸಕ್ಕಿದ್ದರು, ಇಷ್ಟು ಬಿಟ್ಟು ನನಗೇನೂ ಗೊತ್ತಿಲ್ಲ ಎಂದಿದ್ದಾರೆ.
ಈ ಪ್ರಕರಣ ಸಂಬಂಧ SIT ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ.ರೇವಣ್ಣನ್ನು ಅರೆಸ್ಟ್ ಮಾಡಿದ್ದಾರೆ. ಹೆಚ್.ಡಿ.ರೇವಣ್ಣ ರಾತ್ರಿಯಿಡೀ ಒತ್ತಡದಲ್ಲೇ ಇದ್ದರು. ಇದೀಗ ರೇವಣ್ಣ ಪುತ್ರ ಪ್ರಜ್ವಲ್ ಮತ್ತು ತನ್ನ ಭವಿಷ್ಯದ ಬಗ್ಗೆ ಆಲೋಚಿಸುತ್ತಿದ್ದು, ದೇವೇಗೌಡರ ಮನೆಯಲ್ಲೇ ಅರೆಸ್ಟ್ ಆಗಿದ್ದಕ್ಕೆ ಇನ್ನಷ್ಟು ಬೇಸರಗೊಂಡಿದ್ದಾರೆ. ಆದರೆ ಮುಂದಿನ ಕಾನೂನು ಪ್ರಕ್ರಿಯೆಗಳ ಸಂಬಂಧವೂ ಆಲೋಚನೆ ಮಾಡುತ್ತಿದ್ದಾರೆ.
ಸಂತ್ರಸ್ತೆ ರೇವಣ್ಣ ಆಪ್ತನ ಮನೇಲಿ ಪತ್ತೆ : ಕೆ.ಆರ್.ನಗರದಿಂದ ಕಿಡ್ನಾಪ್ ಆಗಿದ್ದ ಸಂತ್ರಸ್ತೆ ರೇವಣ್ಣ ಆಪ್ತನ ಮನೇಲಿ ನಿನ್ನೆ ಪತ್ತೆಯಾಗಿದ್ದರು. ಮೇ 2ರಂದು ನನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಪುತ್ರ ದೂರು ನೀಡಿದ್ದ. SIT ಪೊಲೀಸರು ನಿನ್ನೆ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ. ಪೆನ್ಡ್ರೈವ್ ವಿಡಿಯೋದಲ್ಲಿದ್ದರು ಎನ್ನಲಾದ ಸಂತ್ರಸ್ತೆ ನಿನ್ನೆ ರೇವಣ್ಣ PA ರಾಜಶೇಖರ್ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದರು. ಭವಾನಿ ಕರೆಯುತ್ತಿದ್ದಾರೆ ಎಂದು ಸಂಬಂಧಿ ಸತೀಶ್ ಬಾಬು ಕರೆದೊಯ್ದಿದ್ದ, SIT ಅಧಿಕಾರಿಗಳು ಸತೀಶ್ ಬಾಬುನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ನಿನ್ನೆ ರಾಜಶೇಖರ್ ತೋಟದ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದಾರೆ.
ಇದನ್ನೂ ಓದಿ : ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ : ಮಾಜಿ ಸಚಿವ ಹೆಚ್.ಡಿ ರೇವಣ್ಣ ಅರೆಸ್ಟ್..!