ಬೆಂಗಳೂರು : ಪ್ರಜ್ವಲ್ ಪ್ರಕರಣದಿಂದ ದೇವೇಗೌಡರು ನೊಂದಿದ್ದಾರೆ. ದೇವೇಗೌಡರ ಆರೋಗ್ಯದ ಮೇಲೆ ಇದು ಪರಿಣಾಮ ಬೀರಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ನಂತರ ನಿಖಿಲ್ ಕುಮಾರಸ್ವಾಮಿ ಮಾತನಾಡಿ, 30 ವರ್ಷ ಜೆಡಿಎಸ್ ಪಕ್ಷವನ್ನು ಗೌಡರು ಕಟ್ಟಿ ಬೆಳೆಸಿದ್ದಾರೆ. ಈ ಪ್ರಕರಣ ಪಕ್ಷದ ಮೇಲೆ ಪರಿಣಾಮ ಬೀರುತ್ತೆ ಅನ್ನೋ ನೋವಿದೆ.
ಇನ್ನು ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಮಾಡುತ್ತಿದೆ, ಸತ್ಯ ಹೊರಬರಲಿ. ನಾನು ಹಾಸನಾಂಬೆ ದರ್ಶನ ಬಿಟ್ಟರೆ ಬೇರೆ ಸಮಯದಲ್ಲಿ ಹಾಸನಕ್ಕೆ ಹೋಗಲ್ಲ. ನನಗೂ ಹಾಸನ ಸಂಸದರಿಗೂ ಅಷ್ಟು ಸಂಪರ್ಕ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : DCP ಕಚೇರಿಯಿಂದಲೇ ಕುಖ್ಯಾತ ರೌಡಿ ಶೀಟರ್ ಎಸ್ಕೇಪ್ – ಆಗಿದ್ದೇಗೆ ಗೊತ್ತಾ ?
Post Views: 131