ಬೆಂಗಳೂರು : ಪೆನ್ಡ್ರೈವ್ ಲೀಕ್ನಲ್ಲಿ ಮಹಾನ್ ನಾಯಕನ ಕೈವಾಡ ಇದೆ ಎಂದು ಡಿಸಿಎಂ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದರು. ಇದೀಗ HDK ಈ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಇಂಥಾ ನೀಚ ಕೆಲಸ ನಮ್ಮ ಜಾಯಮಾನದಲ್ಲೂ ಮಾಡಲ್ಲ, ಕುಮಾರಸ್ವಾಮಿಗೆ ನನ್ನ ನೆನಪಿಸಿಕೊಳ್ಳದಿದ್ದರೇ ನಿದ್ದೆ ಬರಲ್ಲ. ನನ್ನ ಟಾರ್ಗೆಟ್ ಮಾಡದಿದ್ದರೆ ಕುಮಾರಸ್ವಾಮಿಗೆ ಊಟ ಸೇರಲ್ಲ, ಪೆನ್ಡ್ರೈವ್ ರಿಲೀಸ್ ಮಾಡೋ ಚಿಲ್ಲರೆ ಕೆಲಸ ನಮ್ಮದಲ್ಲ ಎಂದು ಹೆಚ್ಡಿಕೆ ವಿರುದ್ಧ ಟಾಂಗ್ ಕೊಟ್ಟಿದ್ದಾರೆ.
ಹೆಣ್ಣು ಮಕ್ಕಳ ಗೌರವ ಕಾಪಾಡೋದು ಮುಖ್ಯ, ನನ್ನ ಮಗ ಒಮ್ಮೆ ಗೆಲ್ಲಿಸಿ ಅಂತಾ ಬೆನ್ನು ತಟ್ಟಿದ್ದು ಯಾರು..? ಈಗ ನನ್ನಗೂ ರೇವಣ್ಣ ಕುಟುಂಬಕ್ಕೂ ಸಂಬಂಧ ಇಲ್ಲ ಅಂತಾರೆ. ಹೆಚ್ಡಿ ಅಂದ್ರೆ ಹೊಳೆನರಸೀಪುರದ ದೇವೇಗೌಡರು ಅಲ್ವಾ..? ನನಗೂ ಪಾಲಿಟಿಕ್ಸ್ .. ಸ್ಟ್ರಾಟರ್ಜಿ ಗೊತ್ತಿದೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ ಹಿಂದಿರೊ ಆ ಮಹಾನಾಯಕ ಯಾರು? : ಹೆಚ್ಡಿಕೆ ಹೇಳಿದ್ದೇನು?