ಬೆಂಗಳೂರು : ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಗಿಂತ ಹೆಚ್ಚಾಗಿ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ ಬಗ್ಗೆಯೇ ಚರ್ಚೆ ಆಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಇದೇ ವಿಚಾರವನ್ನು ಅಸ್ತ್ರ ಮಾಡಿಕೊಂಡು ಮುನ್ನುಗ್ಗುತ್ತಿರುವ ಸಮಯದಲ್ಲೇ, ಇದೀಗ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ದೇವರಾಜೇಗೌಡ ಅವರು, ಪೆನ್ಡ್ರೈವ್ ಲೀಕ್ ಮಾಡಿದ್ದು ಕಾಂಗ್ರೆಸ್ನವ್ರೇ. ನಾನು ಸ್ಟೇಟ್ಮೆಂಟ್ ಕೊಟ್ರೆ ಸರ್ಕಾರ ಇರಲ್ಲ. ಸ್ಟೇಟ್ಮೆಂಟ್ ಕೊಟ್ಟ ತಕ್ಷಣ ಸರ್ಕಾರ ಬಿದ್ದು ಹೋಗುತ್ತೆ.ಪೆನ್ಡ್ರೈವ್ ಬಗ್ಗೆ ಅಂತಹ ಭಯಾನಕ ಸಾಕ್ಷಿ ನನ್ನ ಬಳಿ ಇದೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್ ಕಾಂಗ್ರೆಸ್ನವರಿಂದ ನ್ಯಾಯ ಸಿಕ್ಕಿಲ್ಲ ಅಂತ ನನ್ನ ಬಳಿ ಬಂದಿದ್ದ. ಕಾಂಗ್ರೆಸ್ ನಾಯಕರಿಗೆ ಮೊದಲೇ ಪೆನ್ ಡ್ರೈವ್ ನೀಡಲಾಗಿತ್ತು.ಕಾಂಗ್ರೆಸ್ ನಾಯಕರೇ ಈ ವಿಡಿಯೋಗಳನ್ನು ರಿಲೀಸ್ ಮಾಡಿರಬಹುದು. ನಿನ್ನೆವರೆಗೂ ಸಂಪರ್ಕದಲ್ಲಿದ್ದ ಕಾರ್ತಿಕ್ ಇಂದು ನನ್ನ ಮೇಲೆ ಆರೋಪಿಸಿದ್ದಾರೆ. ರಾಜಕೀಯ ಕುತಂತ್ರಕ್ಕಾಗಿ ಎಷ್ಟೋ ಜನ ಮಹಿಳೆಯರ ಮರ್ಯಾದೆ ತೆಗೆದಿದ್ದಾರೆ.
ಇನ್ನು ಈ ಕೇಸ್ ಸಿಬಿಐ ಹೋಗೋವರೆಗೂ ನಾನು ಬಿಡಲ್ಲ. ಪ್ರಜ್ವಲ್ ಮಾಡಿದ್ದು ತಪ್ಪು, ರೇವಣ್ಣ ಫ್ಯಾಮಿಲಿಯನ್ನು ಸುಮ್ನೆ ಬಿಡಲ್ಲ. HD ರೇವಣ್ಣ ಕುಟುಂಬವನ್ನು ಬೀದಿಗೆ ತಂದೇ ತರುತ್ತೇನೆ. SIT ನೋಟಿಸ್ ಕೊಟ್ರೆ ನಾನು ಹಾಜರಾಗ್ತಿನಿ ಎಂದ ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ನೇಹಾ ಹಿರೇಮಠ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಭೇಟಿ..!