ಮೈಸೂರು : ರಾಜ್ಯಕಂಡ ಧೀಮಂತ ರಾಜಕಾರಣಿ. ಚಾಮರಾಜನಗರದ ಸಂಸದರಾಗಿ, ನಂಜನಗೂಡಿನ ಶಾಸಕರಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಮಿನುಗಿದ್ದ ಶ್ರೀನಿವಾಸ್ ಪ್ರಸಾದ್ ಎಂಬ ನಕ್ಷತ್ರ ಕಣ್ಮರೆಯಾಗಿದೆ. ದಲಿತ ಸೂರ್ಯ ಎಂದೇ ಖ್ಯಾತಿ ಹೊಂದಿದ್ದ ಬಿಜೆಪಿ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಅವರು ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದರು. ಇಂದು ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ ನೆರವೇರಿಲಿದೆ.
ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯ ಸಂಸ್ಕಾರ ಇಂದು ಮೈಸೂರಿನ ಮಾನಂದವಾಡಿ ರಸ್ತೆ ಬಳಿ ನಡೆಯಲಿದ್ದು, ಬೌದ್ಧ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನರವೇರಲಿದೆ. ಅಶೋಕ್ ಪುರಂ ಮೂಲಕ ಸಿಲ್ಕ್ ಫ್ಯಾಕ್ಟರಿ ಸರ್ಕಲ್ನ ಡಾ.ಅಂಬೇಡ್ಕರ್ ಟ್ರಸ್ಟ್ವರೆಗೆ ಪಾರ್ಥೀವ ಶರೀರದ ಮೆರವಣಿಗೆ ಜರುಗಲಿದೆ. ಇನ್ನು ಮೈಸೂರು, ಚಾಮರಾಜನಗರ ಜಿಲ್ಲೆಯ ಸ್ಕೂಲ್, ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ನಿನ್ನೆಯಿಂದ ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮೈಸೂರಿನ ಅಶೋಕಪುರಂ ಸರ್ಕಾರಿ ಶಾಲೆ ಆವರಣದಲ್ಲಿ ಶ್ರೀನಿವಾಸ್ ಪ್ರಸಾದ್ ಅಂತಿಮ ನಮನ ಸಲ್ಲಿಸಿದ್ರು. ಶ್ರೀನಿವಾಸ್ ಪ್ರಸಾದ್ಗೆ ಅಂತಿಮ ದರ್ಶನ ಪಡೆದು ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ರು. ರಾಜ್ಯಕಂಡ ಮೇರು ರಾಜಕಾರಣಿಯನ್ನು ನಾವು ಕಳೆಸುಕೊಂಡಿದ್ದೇವೆ. ದಮನಿತರ ಪರವಾದ ಧ್ವನಿ ಶ್ರೀನಿವಾಸ್ ಪ್ರಸಾದ್ ನಿಧನ ನಾಡಿಗೆ ದೊಡ್ಡ ನಷ್ಟವಾಗಿದೆ. ಒಬ್ಬ ಸ್ನೇಹಿತನನ್ನ ಕಳೆದುಕೊಂಡು ದುಃಖವಾಗಿದೆ ಎಂದು ಸಿಎಂ ಕಂಬನಿ ಮಿಡಿದರು. ಇನ್ನು ಡಿಸಿಎಂ ಡಿಕೆಶಿ ಕೂಡ ಹಳೇ ನೆನಪುಗಳನ್ನ ಮೆಲುಕು ಹಾಕಿದ್ರು.
ಇದನ್ನೂ ಓದಿ : ಬೆಂಗಳೂರು : ಹೆತ್ತ ಮಗಳನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊ*ಲೆ ಮಾಡಿದ ತಾಯಿ – ಅಸಲಿಗೆ ಆಗಿದ್ದೇನು?