ಬೆಂಗಳೂರು : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳ ಮಾಂಗಲ್ಯವನ್ನು ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಕಿಡಿಕಾರಿದ ಡಿಕೆ ಶಿವಕುಮಾರ್, ಪ್ರಧಾನಿ ಮೋದಿಗೆ ಸೋಲಿನ ಹತಾಷೆ ಕಾಡ್ತಿದೆ. ಜನರನ್ನು ದಿಕ್ಕು ತಪ್ಪಿಸಲು ಮಾಂಗಲ್ಯದ ಹೇಳಿಕೆ ಕೊಡ್ತಿದ್ದಾರೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಮೋದಿ ಸರ್ಕಾರ ಬಂದ್ಮೇಲೆ ಚಿನ್ನದ ಬೆಲೆ ಶೇ.300ರಷ್ಟು ಏರಿಕೆಯಾಗಿದೆ. ಮಾಂಗಲ್ಯವನ್ನು ಮಾಡಿಸಲೂ ಆಗದ ಸ್ಥಿತಿಯನ್ನು ಬಿಜೆಪಿಯವರು ನಿರ್ಮಾಣ ಮಾಡಿದ್ದಾರೆ. ಇನ್ನು ಕಿತ್ತುಕೊಳ್ಳೋದು ಎಲ್ಲಿಂದ ಬಂತು ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ನೋವಿನ ಮಾತುಗಳನ್ನೇ ಹೇಳಿದ್ದಾರೆ. ದೇಶದ ಐಕ್ಯತೆಗಾಗಿ ಇಂದಿರಾ ಚಿನ್ನ ಕೊಟ್ರು, ಸೋನಿಯಾ ಮಾಂಗಲ್ಯ ಕಳ್ಕೊಂಡ್ರು ಇಂಥಾ ಪಕ್ಷ ಮಾಂಗಲ್ಯ ಕಸಿದುಕೊಳ್ಳೋ ಆಲೋಚನೆ ಮಾಡುತ್ತಾ ಎಂದು ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ನೇಹಾ ನಿವಾಸಕ್ಕೆ ಸಿಐಡಿ ಟೀಂ ಭೇಟಿ – ಪೋಷಕರ ಹೇಳಿಕೆ ಪಡೆದ ಅಧಿಕಾರಿಗಳು..!