ಉಡುಪಿ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ‘ಪೋಸ್ಟರ್ ವಾರ್’ ಅಭಿಯಾನ ನಡೆಸಿದ್ದಾರೆ. ಉಡುಪಿಯ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ‘ಪಿಕ್ ಪಾಕೆಟ್ ಸರ್ಕಾರ’ ಎಂಬ ಭಿತ್ತಿಚಿತ್ರ ಅಂಟಿಸಿ ಪ್ರತಿಭಟಿಸಿದ್ದಾರೆ.
ಉಡುಪಿಯ ಕರಾವಳಿ ಬೈಪಾಸ್, ಕೆಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಬಸ್ಗಳಿಗೆ ಪಿಕ್ಪಾಕೆಟ್ ಸರ್ಕಾರ ಹಾಗೂ ಕೊಟ್ಟಿದ್ದಕ್ಕಿಂತ ದೋಚಿದ್ದೇ ಹೆಚ್ಚು ಎಂಬ ಬರಹ ಚಿತ್ರವಿರುವ ಪೋಸ್ಟರ್ ಅಂಟಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಜನರ ಹಣವನ್ನೇ ಸುಲಿಗೆ ಮಾಡಿ, ಅದನ್ನೇ ಗ್ಯಾರಂಟಿ ಹೆಸರಲ್ಲಿ ಹಂಚಿಕೆ ಮಾಡುತ್ತಿದೆ. ಜನರ ಜೇಬಿಗೆ ಕತ್ತರಿ ಹಾಕಿ ಐದು ಭಾಗ್ಯ ನೀಡುತ್ತಿದೆ. ಜನರ ದುಡ್ಡನ್ನು ಕಿತ್ತುಕೊಂಡು ಉಚಿತ ಭಾಗ್ಯ ಎನ್ನುತ್ತಿದೆ. ಹಿಂದು ವಿರೋಧಿ ನೀತಿ ಅನುಸರಿಸಿ, ಕೇವಲ ಒಂದೇ ಕೋಮಿನ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವಂತೆ ಮನವಿ ಮಾಡಿದ ಜಿ.ಕೆ ಗಿರೀಶ್ ಉಪ್ಪಾರ್..!