ಬಾಗಲಕೋಟೆ : ಮದುವೆಗೆ ಹೊರಟಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಘಟನೆ ನಿನ್ನೆ ರಾತ್ರಿ ಮಹಾರಾಷ್ಟ್ರದ ಜತ್ತ ಸಮೀಪ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದರೆ, 10 ಜನರಿಗೆ ಗಾಯವಾಗಿದೆ.
ಮೃತರನ್ನು ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ 17 ವರ್ಷದ ಭಾಗ್ಯಶ್ರೀ ಅಂಬೇಕರ್, ಅಡಿಹುಡಿ ಗ್ರಾಮದ 21 ವರ್ಷದ ಉಜ್ವಾಲಾ ಶಿಂಧೆ, ಲೋಕಾಪುರದ 20 ವರ್ಷದ ನಿವೇದಿತಾ ಹಾಗೂ ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಎಂದು ಗುರುತಿಸಲಾಗಿದೆ.
ಕ್ರೂಷರ್ನಲ್ಲಿದ್ದವರು ಮಹಾರಾಷ್ಟ್ರದ ಜತ್ತ ಬಳಿ ಮದುವೆಗೆ ತೆರಳುತ್ತಿದ್ದರು. ಈ ವೇಳೆ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ಇಂದಿನಿಂದ ರಾಜ್ಯದಲ್ಲಿ 5ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ..!
Post Views: 248