ಬೆಂಗಳೂರು : ಜೆಡಿಎಸ್ಗೆ 4 ಸ್ಥಾನಗಳೂ ಬರಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲು ಖಚಿತ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು. ಡಿಕೆಶಿ ಭವಿಷ್ಯಕ್ಕೆ ಮಾಜಿ ಸಿಎಂ ಹೆಚ್ಡಿಕೆ ತಿರುಗೇಟು ನೀಡಿ, ಅವರು ಎಲ್ಲೋ ತಪ್ಪು ಹೇಳಿದ್ದಾರೆ, 4 ಕ್ಷೇತ್ರ ಅಲ್ಲ 28 ಕ್ಷೇತ್ರದಲ್ಲೂ ನಮ್ಮದೇ ಗೆಲುವು ಎಂದಿದ್ದಾರೆ.
ಇದೇ ವೇಳೆ ಮಾತನಾಡಿ, ಮೇಕೆದಾಟು ಪಾದಯಾತ್ರೆಯಲ್ಲಿ ನಾನು ತೂರಾಡಿದ್ನಾ..? ಊಟದಲ್ಲಿ ಗ್ಲಾಸ್ ಇಟ್ಟಿದ್ದು ಕಾಂಗ್ರೆಸ್ನವರು ನೋಡಿದ್ರಾ.? ಊಟಕ್ಕೆ ಗ್ಲಾಸ್ ಇಡೋ ಸಂಸ್ಕೃತಿ ನಮ್ಮದಲ್ಲ ಅವರದ್ದು ಎಂದು ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.
ನನ್ನ ತೋಟದ ಮನೆ ಸಿಬ್ಬಂದಿಗೆ ಊಟ ಮಾಡಿಸಿದ್ದೆ ನನ್ನ ತೋಟದಲ್ಲಿ ಈಗಲೂ 120 ಜನ ಕೆಲಸ ಮಾಡ್ತಿದ್ದಾರೆ. ಅವರಿಗಾಗಿ ಹಬ್ಬದ ಹಿನ್ನೆಲೆಯಲ್ಲಿ ಊಟ ರೆಡಿ ಮಾಡಿಸಿದ್ದೆವು, ತೋಟದ ಮನೆಯೇ ನಮ್ಮ ಪಕ್ಷಕ್ಕೆ ಹೆಡ್ ಆಫೀಸ್ ಇದ್ದಂತೆ. ನನಗೂ ತಲೆ ಇದೆ, ಎಲ್ಲಿ ಏನ್ ಮಾಡ್ಬೇಕು ಅನ್ನೋದು ಗೊತ್ತಿದೆ. ತಹಶಿಲ್ದಾರ್ಗೆ ಪದೇ ಪದೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : “ರಿಪ್ಪನ್ ಸ್ವಾಮಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ – ಚಿನ್ನಾರಿ ಮುತ್ತನ ರಗಡ್ ಲುಕ್ಗೆ ಫ್ಯಾನ್ಸ್ ಫಿದಾ..!