ಧಾರವಾಡ : ಇದು ನನ್ನ ಚುನಾವಣೆಯಲ್ಲ, ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಅಂತಾ ಹೇಳುತ್ತೇನೆ. ಈಗ ಜೋಶಿ ಅವರ ಚುನಾವಣೆ ನಡೆದಿದೆ. ಅವರೇನು ಮಾಡಿದ್ದಾರೆ ಹೇಳಲಿ ಎಂದು ಸಂತೋಷ್ ಲಾಡ್ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ ನಡೆಸಿ, 4 ಬಾರಿ, 20 ವರ್ಷ MP ಆಗಿದ್ದೀರಿ ಈ ಅವಧಿಯಲ್ಲಿ ನೀವೇನು ಮಾಡಿದ್ದೀರಿ ಹೇಳಿ. ಜನರತ್ತ ನಾನು ಹೋಗಿ ನಾನು ಮಾಡಿದ ಕೆಲಸ ಹೇಳುವೆ ಎಂದು ಜೋಶಿ ವಿರುದ್ಧ ಗುಡುಗಿದ್ದಾರೆ.
ನನಗೆ ಸಿದ್ದರಾಮಯ್ಯ ಬೈಯ್ಯೋಕೆ ಇಟ್ಟಿದ್ದಾರೆ ಅಂತಾರೆ. ಹಾಗಾದರೆ ಇವರನ್ನು ಮೋದಿ ಸುಳ್ಳು ಹೇಳೋಕೆ ಇಟ್ಟಿದಾರಾ? ವಿಶ್ವದಲ್ಲಿ ಸುಳ್ಳು ಹೇಳುವ ಪಕ್ಷ ಬಿಜೆಪಿ. ಅದರಲ್ಲಿ ನಂ. 1 ಪ್ರಹ್ಲಾದ ಜೋಶಿ. ಪದೇ ಪದೇ ಜೋಶಿಯವರೇ ಸುಳ್ಳು ಹೇಳಬೇಡಿ. ಅಭಿವೃದ್ಧಿ ವಿಷಯದಲ್ಲಿ ಬನ್ನಿ ಮಾತನಾಡೋಣ. ನೀವು, ಹಿರಿಯ ನಾಯಕರು ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ. ನಾನು ಜೋಶಿ ಹಾಗೂ ಪ್ರಧಾನಿಯವರಿಗೆ ಬೈದಿಲ್ಲ. ಪ್ರಶ್ನೆ ಕೇಳಿದ್ರೆ ಬೈಯ್ಯದಂತೆನಾ? ಎಂದು ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಪೀಣ್ಯ ಎಸಿಪಿ ಕಛೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ – ಅರೆಸ್ಟ್ ಆಗ್ತಾರ ಎಸಿಪಿ ರಮೇಶ್?