ಬೆಂಗಳೂರು : ಲೋಕಾಯುಕ್ತ ಪೊಲೀಸರಿಂದ ಪೀಣ್ಯ ಎಸಿಪಿ ಕಛೇರಿ ಮೇಲೆ ದಾಳಿ ಪ್ರಕರಣ ಸಂಬಂಧ ಇದೀಗ ಪೀಣ್ಯ ಎಸಿಪಿ ರಮೇಶ್ಗೆ ಸಂಕಷ್ಟ ಶುರುವಾಗಿದೆ. ಯಾವುದೇ ಕ್ಷಣದಲ್ಲಿ ಪೀಣ್ಯ ಎಸಿಪಿ ಅರೆಸ್ಟ್ ಆಗುವ ಸಾದ್ಯತೆಯಿದೆ.
ಪೀಣ್ಯ ಎಸಿಪಿ ಕಛೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಎಸಿಪಿ ಜೀಪ್ ಡ್ರೈವರ್, ಹೆಡ್ ಕಾನ್ಸ್ಟೆಬಲ್ ವಿರುದ್ಧ ಮಾತ್ರ ಪ್ರಕರಣ ದಾಖಸಿಕೊಂಡು ಪ್ರಮುಖ ಆರೋಪಿ ಎಸಿಪಿ ರಮೇಶ್ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದೀಗ ಈ ವಿಚಾರಕ್ಕೆ ಲೋಕಾಯುಕ್ತ ಪೊಲೀಸರ ವಿರುದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಸಮಾಧಾನಗೊಂಡಿದೆ. ಪ್ರಮುಖವಾಗಿ ದೂರುದಾರರು ನೀಡಿದ ದೂರಿನಲ್ಲಿ ಎಸಿಪಿ ಹೆಸರಿದ್ದರೂ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿಲ್ಲ. ಇದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಹಿನ್ನಲೆ ಲೋಕಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಕೋರ್ಟ್ ಎಸಿಪಿಯೇ ಲಂಚದ ಮಾಸ್ಟರ್ಮೈಂಡ್, ಎಸಿಪಿ ವಿರುದ್ಧ ತನಿಖೆ ನಡೆಯಬೇಕು ಎಂದು ತಿಳಿಸಿದೆ. ಇನ್ನು ಎಸಿಪಿ ಸೂಚನೆ ಮೇರೆಗೆ ಚಾಲಕ ನಾಗರಾಜ್ ದೂರುದಾರನಿಂದ ಲಂಚ ಪಡೆದಿದ್ದಾರೆ. ಈ ಕಾರಣಕ್ಕಾಗಿ ವಿಶೇಷ ನ್ಯಾಯಾಲಯ ಎಸಿಪಿಯ ಚಾಲಕ ನಾಗರಾಜ್ಗೆ ಜಾಮೀನು ನಿರಾಕರಿಸಿದೆ.
ಪ್ರಕರಣದ ಹಿನ್ನಲೆ : ಗ್ಯಾಸ್ ಸಿಲಿಂಡರ್ಗಳನ್ನು ವಿತರಿಸಲು ಅನುಮತಿ ನೀಡಲು ಪೀಣ್ಯ ಎಸಿಪಿ ರಮೇಶ್ ಎರಡು ಲಕ್ಷ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ಚೇತನ್ ಎಂಬಾತ ಲೋಕಯುಕ್ತ ಪೊಲೀಸರಿಗೆ ದೂರುನೀಡಿದ್ದರು. ಇನ್ನು ಎಸಿಪಿ ಸೂಚನೆ ಮೇರೆಗೆ ಜೀಪ್ ಡ್ರೈವರ್ ನಾಗರಾಜ್,ಹಾಗು ಹೆಡ್ ಕಾನ್ಸ್ಟೇಬಲ್ ಗಂಗಹನುಮಯ್ಯ ಮುಂಗಡವಾಗಿ 50 ಸಾವಿರ ಪಡೆಯುವಾಗ ಚೇತನ್ ಎಂಬಾತ ಕೊಟ್ಟ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಕಳೆದ ತಿಂಗಳ 26 ರಂದು ಆರ್ ಎಂ ಸಿ ಯಾರ್ಡ್ ನಲ್ಲಿರುವ ಎಸಿಪಿ ಕಛೇರಿಗೆ ದಾಳಿ ಮಾಡಿದ್ದರು. ಲೋಕಾಯುಕ್ತ ಇನ್ಸ್ ಪೆಕ್ಟರ್ ವಿಜಯ ಕೃಷ್ ಮತ್ತು ತಂಡದಿಂದ ನಡೆದಿದ್ದ ಟ್ರ್ಯಾಪ್ನಲ್ಲಿ ಹಣ ಪಡೆಯುವಾಗ ಎಸಿಪಿ ಜೀಪ್ ಡ್ರೈವರ್ ಹಾಗು ಪೀಣ್ಯ ಠಾಣೆಯ ಹೆಡ್ ಕಾನ್ಸ್ಟೇಬಲ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದರು.
ಇದನ್ನೂ ಓದಿ : ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಹೇಳಿಕೆ – ಶಾಸಕ ಯತ್ನಾಳ್ ವಿರುದ್ಧ ದೂರು ದಾಖಲು..!