ಬೆಂಗಳೂರು : ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್ ಮಂಜುನಾಥ್ಗೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಬಿಜೆಪಿ ಒಳ ಜಗಳದಿಂದಾಗಿ ಡಾ.ಮಂಜುನಾಥ್ ಅವರು ವಿಲವಿಲ ಒದ್ದಾಡುತ್ತಿದ್ದಾರೆ. ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಒಬ್ಬರು ಬಂದ್ರೆ ಮತ್ತೊಬ್ಬರು ಮಂಜುನಾಥ್ ಪರ ಪ್ರಚಾರಕ್ಕೆ ಬರ್ತಿಲ್ಲ. ಹಾಗಾಗಿ ಡಾ.ಸಿ.ಎನ್.ಮಂಜುನಾಥ್ಗೆ ಭಾರೀ ಇರಿಸು-ಮುರಿಸು ಉಂಟಾಗಿದೆ.
ಪ್ರಚಾರದ ನೇತೃತ್ವ ಯಾರು ವಹಿಸಬೇಕು ಅನ್ನೋ ವಿಷಯಕ್ಕಾಗಿ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ್, ಎಂ.ಕೃಷ್ಣಪ್ಪ ನಡುವೆ ಅಸಮಾಧಾನ ಉಂಟಾಗಿದೆ. ಆರ್.ಅಶೋಕ್ ಬಂದ್ರೆ ಎಂ.ಕೃಷ್ಣಪ್ಪ ಬರ್ತಾ ಇಲ್ಲ, ಎಂ.ಕೃಷ್ಣಪ್ಪ ಬಂದ್ರೆ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬರ್ತಾ ಇಲ್ಲ. 5 ಲಕ್ಷ ವೋಟ್ ಪಡೆದಿದ್ದ ತುಳಸಿ ಮುನಿರಾಜು ಹತ್ತಿರಕ್ಕೂ ಬರ್ತಾ ಇಲ್ಲ. ಹೊರಗಿನ ನಾಯಕರು ಬಂದ್ರೆ ಬಿಜೆಪಿ ಕಾರ್ಯಕರ್ತರೇ ಬರಲ್ಲ. ನಾಯಕರದ್ದೇ ಒಂದು ಗುಂಪು, ಕಾರ್ಯಕರ್ತರದ್ದೇ ಇನ್ನೊಂದು ಗುಂಪು ಸೃಷ್ಠಿಯಾಗಿದೆ.
ಬಿಜೆಪಿಯ ಗುಂಪು ರಾಜಕಾರಣದಲ್ಲಿ ಡಾ.ಸಿ.ಎನ್.ಮಂಜುನಾಥ್ ಹೈರಾಣಾಗಿದ್ದಾರೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ತಿದ್ದು, ಈಗಾಗಲೇ 10ಕ್ಕೂ ಹೆಚ್ಚು ನಗರಸಭೆ ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : ‘ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ’ ಡಾಲಿ ಹೇಳಿದ ಮಾತು ಈಗ ಸಿನಿಮಾದ ಶೀರ್ಷಿಕೆ..!