Download Our App

Follow us

Home » ರಾಜಕೀಯ » ಚೊಂಬು ಹಿಡಿದು ಬಂದ ಕಾಂಗ್ರೆಸ್​ಗೆ ರಾಜಾಹುಲಿ ತಿರುಗೇಟು : ‘ಕೈ’ ಪಡೆಗೆ ಬಿ.ಎಸ್ ವೈ ಖಡಕ್ ವಾರ್ನಿಂಗ್..!

ಚೊಂಬು ಹಿಡಿದು ಬಂದ ಕಾಂಗ್ರೆಸ್​ಗೆ ರಾಜಾಹುಲಿ ತಿರುಗೇಟು : ‘ಕೈ’ ಪಡೆಗೆ ಬಿ.ಎಸ್ ವೈ ಖಡಕ್ ವಾರ್ನಿಂಗ್..!

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಾಂತಿಯ ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಕ್ರೂರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿ.ಎಸ್​​ ಯಡಿಯೂರಪ್ಪ ಮಾತನಾಡಿ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದಿದೆ. ಮಂಡ್ಯದಲ್ಲಿ ಕೇಸರಿ ಧ್ವಜ ತೆರವು ಮಾಡಿಸಿದ್ರು. ಹನುಮಾನ್​​ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ರು. ಶ್ರೀರಾಮ ಭಕ್ತರ ಮೇಲೆ ಅಟ್ಯಾಕ್​ಗೆ ಪ್ರೇರಣೆ ಕೊಟ್ಟರು. ಮೋದಿಗೆ ಮತಹಾಕಿ ಎಂದಿದ್ದಕ್ಕೆ ಕಾರು ಹರಿಸಿದ್ರು. ಮೋದಿಗಾಗಿ ಹಾಡು ಬರೆದವರ ಮೇಲೆ ಹಲ್ಲೆ ಮಾಡಲಾಯ್ತು. ಈ ಎಲ್ಲಾ ಘಟನೆಗಳಿಂದ ರಾಜ್ಯದಲ್ಲಿ ಉಗ್ರ ಚಟುವಟಿಕೆಗೆ ಗ್ಯಾರಂಟಿ ಸಿಕ್ಕಿದೆ. ಕಾಂಗ್ರೆಸ್​ ಒಂದೇ ವರ್ಷದಲ್ಲಿ ರಾಜ್ಯವನ್ನು ಮತಾಂಧರ ನಾಡು ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬಂದ್ಮೇಲೆ ಅಭಿವೃದ್ಧಿ ಕುಸಿದಿದೆ. ರಾಜ್ಯದಲ್ಲಿ 1 ಕಿ.ಮೀ ರಸ್ತೆ ಕಾಮಗಾರಿ ಕೂಡಾ ನಡೆದಿಲ್ಲ.ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಆಗ್ತಿಲ್ಲ. ಸ್ವತಃ ನಾನೇ ಕಾಂಗ್ರೆಸ್​ ನಾಯಕರ ಜತೆ ಬರ್ತೀನಿ ಅಭಿವೃದ್ಧಿ ತೋರಿಸಲಿ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಜ್ಯದಲ್ಲಿ ಕಲ್ಲು ಬಂಡೆಯ ಮನಸ್ಸಿನ ಸರ್ಕಾರ ಇದೆ. ಕರ್ನಾಟಕದಲ್ಲಿ 700ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ರಾಜ್ಯದ ನೀರಾವರಿ ಯೋಜನೆ ನಿಂತು ಹೋಗಿವೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ನಿನ್ನೆ ಪ್ರಧಾನಿ ಮೋದಿ ರಾಜ್ಯಕ್ಕೆ ಎಂಟ್ರಿ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರು ಚೊಂಬು ಹಿಡಿದು ಪ್ರತಿಭಟಿಸಿದ್ದಾರೆ. ಈ ವಿಚಾರಕ್ಕೆ ಕಾಂಗ್ರೆಸ್​ಗೆ ಬಿಜೆಪಿ ರಾಜಾಹುಲಿ ತಿರುಗೇಟು ನೀಡಿ, ಕಾಂಗ್ರೆಸ್​ನ ಇಂಥಾ ಸುಳ್ಳು ಪ್ರಚಾರದಿಂದ ಲಾಭ ಆಗೋದಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಡ್ಬೇಕೋ ಕೊಟ್ಟಿದೆ. ಈಗಾಗಲೇ ಪ್ರಧಾನಿ ಮೋದಿಯವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.ನಾಳೆ ಅಮಿತ್​ ಶಾ ಬರ್ತಾರೆ ದಾಖಲೆ ಸಮೇತ ಎಲ್ಲಾ ಹೇಳ್ತಾರೆ. ಸುಳ್ಳು ಹರಡಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸಲು ಆಗಲ್ಲ. ರಾಜ್ಯದ ಜನರಿಗೆ ಮೋದಿ ಸಾಧನೆ ಬಗ್ಗೆ ಅರಿವಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ಗೆ ಬಿಎಸ್​ವೈ ಪ್ರತ್ಯುತ್ತರ ನೀಡಿದ್ದಾರೆ.

ಇದನ್ನೂ ಓದಿ : ‘ಹೊಸತರ’ ಸಿನಿಮಾದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಅಫ್ಜಲ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here