Download Our App

Follow us

Home » ಜಿಲ್ಲೆ » ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ – ಮಂಗನ ಕೈಲಿತ್ತು ಆಕೆಯ ಮರಣ..!

ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ – ಮಂಗನ ಕೈಲಿತ್ತು ಆಕೆಯ ಮರಣ..!

ಬಾಗಲಕೋಟೆ : ಚಂದ್ರಾದೇವಿ ದೇವಸ್ಥಾನದ ದ್ವಾರ ಬಾಗಿಲಿಗೆ ಮಂಗವೊಂದು ಜಿಗಿದ ಪರಿಣಾಮ ದ್ವಾರ ಬಾಗಿಲಿನ ಮೇಲಿದ್ದ ಕಲ್ಲು ಮಹಿಳೆಯ ಮೇಲೆ ಬಿದ್ದು, ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ. 44 ವರ್ಷದ ಸುರೇಖಾ ಕಂಬಾರ ಮೃತ ಮಹಿಳೆ.

ಮೃತ ಮಹಿಳೆ ಮೂಲತಃ ಹುನ್ನೂರು ಗ್ರಾಮದವರಾಗಿದ್ದು, ಪ್ರತೀ ಸೋಮವಾರ ಆಲಗೂರು ಗ್ರಾಮದ ಸಂತೆಗೆ ತರಕಾರಿ ಮಾರಾಟ ಮಾಡಲು ಆಗಮಿಸುತ್ತಿದ್ದರು. ದೇವಸ್ಥಾನದ ದ್ವಾರಬಾಗಿಲಿನ ಕೆಳಗಡೆ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದರು.

ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಛಂಗನೇ ಜಿಗಿದಿದೆ ಎನ್ನಲಾಗಿದೆ. ದೇವಸ್ಥಾನದ ದ್ವಾರ ಬಾಗಿಲಿನ ಮೇಲಿದ್ದ ಕಲ್ಲು ಮಹಿಳೆಯ ಮೇಲೆ ಬಿದ್ದು, ತೀವ್ರ ರಕ್ತಶ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ಇದನ್ನೂ ಓದಿ : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸುರೇಶ್ ಬಾಬು ನೇಮಕ..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here