ಬೆಂಗಳೂರು : ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ವಾರ್ಡ್ ಬಾಯ್ ರೋಗಿಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ.
ವೆಂಕಟೇಶ್ ಎಂಬಾತ ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆಗೆ ದಾಖಲಾಗಿ, ಸ್ಥಿಮಿತತೆ ಕಳೆದುಕೊಂಡಂತೆ ರೋಗಿ ಕೂಗಾಡ್ತಿದ್ದ. ವಿಷ ಕುಡಿದು, ಮಾನಸಿಕ ಸ್ಥಿತಿಯಿಲ್ಲದಂತೆ ರೋಗಿ ಕೂಗಾಡ್ತಿದ್ದ. ಈ ವೇಳೆ ರೋಗಿಯ ಕೈ ಕಾಲು ಕಟ್ಟಿ ಹಾಕಲಾಗಿತ್ತು. ಕೂಗಾಡ್ತಾ, ಚೀರಾಡ್ತಾ ಇರುವಾಗ ಮೂವರು ವಾರ್ಡ್ ಬಾಯ್ಗಳು ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಎಮ್ಮೆ ಮಾರಾಟಕ್ಕಾಗಿ ಯುವಕರ ಮಧ್ಯೆ ಮಾರಾಮಾರಿ : ಓರ್ವನಿಗೆ ಗಾಯ..!
Post Views: 21