Download Our App

Follow us

Home » ಸಿನಿಮಾ » ಪತಿ ದರ್ಶನ್​ಗಾಗಿ ಶಕ್ತಿ ದೇವತೆ ಬಂಡೆ ಮಹಾಕಾಳಿಯ ಮೊರೆ ಹೋದ ವಿಜಯಲಕ್ಷ್ಮಿ..!

ಪತಿ ದರ್ಶನ್​ಗಾಗಿ ಶಕ್ತಿ ದೇವತೆ ಬಂಡೆ ಮಹಾಕಾಳಿಯ ಮೊರೆ ಹೋದ ವಿಜಯಲಕ್ಷ್ಮಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ಪತಿ ದರ್ಶನ್​ಗಾಗಿ ವಿಜಯಲಕ್ಷ್ಮೀ ನಿನ್ನೆ ಶಕ್ತಿ ದೇವತೆಯ ಮೊರೆ ಹೋಗಿದ್ದರು. ಶಕ್ತಿ ದೇವತೆ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಅರೆಸ್ಟ್ ಆಗುವ 2 ದಿನಗಳ ಹಿಂದೆ ಕೂಡ ನಟ ದರ್ಶನ್ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ರು. ಬಳಿಕ ದೃಷ್ಟಿ ತೆಗೆಸಿ ತಡೆ ಒಡೆಸಿ ಹೋಗಿದ್ರು. ಮನಸ್ಸಿನಲ್ಲಿ ತಳಮಳ, ಗೊಂದಲವಾಗ್ತಿದೆ ಎಂದು ಮನೆಯಲ್ಲಿ ದೃಷ್ಟಿ ಪೂಜೆ ಸಹ ಮಾಡಿಸಲಾಗಿತ್ತು. ದೃಷ್ಟಿ ಪೂಜೆ ಮಾಡಿಸಿ ಶಕ್ತಿ ದೇವತೆ ಆರಾಧಿಸುವ ಪೂಜಾರಿಯಿಂದ ತಡೆ ಒಡೆಸಿದ್ರು. ಪೂಜೆ ಬಳಿಕ ಒಂದಷ್ಟು ದಿನ ಹೊರಗೆಲ್ಲಾದರು ಹೋಗಿ ಬನ್ನಿ ಎಂದು ನಟ ದರ್ಶನ್​ಗೆ ಪೂಜಾರಿ ಸಲಹೆ ಕೂಡ ಕೊಟ್ಟಿದ್ದರಂತೆ.

ನಿನ್ನೆ ನಟ ದರ್ಶನ್ ಆರೋಪ ಮುಕ್ತರಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅದೇ ಶಕ್ತಿ ದೇವತೆ ಮೊರೆ ಹೋಗಿದ್ದರು. ನಟ ದರ್ಶನ್ ಬಂಡೆ ಮಹಾಕಾಳಿ ದೇವಿಯನ್ನ ಅರಾಧಿಸುತ್ತಿದ್ರು, ದೇವಿ ಮೇಲೆ ಅಪಾರ ನಂಬಿಕೆ ಹೊಂದಿದ್ರು.

ಇದನ್ನೂ ಓದಿ : ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ADLR, RI ಅಧಿಕಾರಿಗಳು..!

Leave a Comment

DG Ad

RELATED LATEST NEWS

Top Headlines

ಲಾಯರ್ ಜಗದೀಶ್​ ಅವರು ಹೆಣ್ಮಕ್ಕಳು ಮುಂದೆ ಡ್ರೆಸ್ ಚೇಂಜ್ ಮಾಡ್ತಾರೆ – ದೊಡ್ಮನೆ ನಾರಿಯರು ಗರಂ..!

ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ

Live Cricket

Add Your Heading Text Here