Download Our App

Follow us

Home » ಜಿಲ್ಲೆ » ಉಡುಪಿಯಲ್ಲಿ ಚಲಿಸುತ್ತಿದ್ದ ಬಸ್​​ಗೆ ಏಕಾಏಕಿ ಹತ್ತಿಕೊಂಡ ಬೆಂಕಿ – ತಪ್ಪಿದ ಭಾರೀ ದುರಂತ..!

ಉಡುಪಿಯಲ್ಲಿ ಚಲಿಸುತ್ತಿದ್ದ ಬಸ್​​ಗೆ ಏಕಾಏಕಿ ಹತ್ತಿಕೊಂಡ ಬೆಂಕಿ – ತಪ್ಪಿದ ಭಾರೀ ದುರಂತ..!

ಉಡುಪಿ : ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್ ಬಳಿ ಕಳೆದ ರಾತ್ರಿ ಬಸ್​ವೊಂದು ಧಗಧಗ ಹೊತ್ತಿ ಉರಿದಿದೆ. ಟೋಲ್ ಸಿಬ್ಬಂದಿ ಬೆಂಕಿ ಗಮನಿಸಿ ಡ್ರೈವರ್​ಗೆ ತಿಳಿಸಿದ್ದು, ಡ್ರೈವರ್​ ತಕ್ಷಣವೇ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಹೊರಕಳಿಸಿದ್ದಾನೆ.

ಸಾರ್ವಜನಿಕರೊಂದಿಗೆ ಸೇರಿ ಬೆಂಕಿ ನಂದಿಸಲು ಟೋಲ್ ಸಿಬ್ಬಂದಿ​​​ ಯತ್ನಿಸಿದ್ರು. ಕೊನೆಗೆ ಅದಾನಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಉಡುಪಿ ಕಡೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಂಜುನಾಥ ಹೆಸರಿನ ಖಾಸಗಿ ಬಸ್ಸಿನಲ್ಲಿ ಹೆಜಮಾಡಿಯ ಕಿರು ಟೋಲ್ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು.

ಬಸ್ಸಿನ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರೊ ಶಂಕೆ ವ್ಯಕ್ತವಾಗಿದೆ. ಡ್ರೈವರ್ ಕೂಡಲೇ​ ಬಸ್​ ನಿಲ್ಲಿಸಿದ್ದರಿಂದ ಪ್ರಯಾಣಿಕರು ಸೇಫ್​​​ ಆಗಿದ್ದು, ಭಾರೀ ಬೆಂಕಿ ದುರಂತವೊಂದು ತಪ್ಪಿದೆ.

ಇದನ್ನೂ ಓದಿ : ಅದಿತಿ ಪ್ರಭುದೇವ ಮಗಳ ಮುದ್ದಾದ ಫೋಟೋಗಳು ರಿವೀಲ್​ – ಈ ಕ್ಯೂಟಿ ಹೆಸರೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

‘ಜಾಲಿವುಡ್‌’ಗೆ ಒಂದು ವರ್ಷದ ಸಂಭ್ರಮ.. ತಂಡದಲ್ಲಿ ಮನೆ ಮಾಡಿದ ಹರುಷ..!

ಡಾ. ಐಸಿರಿ ಕೆ ಗಣೇಶ್ ಅವರ ಸಾರಥ್ಯದ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದೆ‌. ಈ ಹಿನ್ನೆಲೆಯಲ್ಲಿ ಜಾಲಿವುಡ್​​​

Live Cricket

Add Your Heading Text Here