Download Our App

Follow us

Home » ರಾಜಕೀಯ » ತುಮಕೂರಿಗೆ ಬಿಜೆಪಿಯಿಂದ ಸೋಮಣ್ಣಗೆ ಟಿಕೆಟ್ : ಜೆ.ಸಿ ಮಾಧುಸ್ವಾಮಿ ಬೆಂಬಲಿಗರಿಂದ ಆಕ್ರೋಶ..!

ತುಮಕೂರಿಗೆ ಬಿಜೆಪಿಯಿಂದ ಸೋಮಣ್ಣಗೆ ಟಿಕೆಟ್ : ಜೆ.ಸಿ ಮಾಧುಸ್ವಾಮಿ ಬೆಂಬಲಿಗರಿಂದ ಆಕ್ರೋಶ..!

ತುಮಕೂರು : ತುಮಕೂರಿನಲ್ಲಿ ಬಿಜೆಪಿಯಿಂದ ವಿ. ಸೋಮಣ್ಣಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿದೆ. ನಿನ್ನೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸೋಮಣ್ಣಗೆ ಖಚಿತವಾದ ಹಿನ್ನೆಲೆಯಿಂದಾಗಿ ಜೆ.ಸಿ ಮಾಧುಸ್ವಾಮಿ ಬೆಂಬಲಿಗರ ಒತ್ತಾಯ ಮುಂದುವರೆದಿದೆ. ಮಾಧುಸ್ವಾಮಿಗೆ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯ ಸೋಮಣ್ಣಗೆ ಟಿಕೆಟ್ ಕೊಟ್ಟಿರುವುದರಿಂದ ಸೋಲು ಖಚಿತ ಎಂದು ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

ಮಾಧುಸ್ವಾಮಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯಿಸಿ, ತುಮಕೂರಿನ ಚಿಕ್ಕನಾಯಕನಹಳ್ಳಿ, ಕೆ ಬಿ ಕ್ರಾಸ್, ಗುಬ್ಬಿ, ತುಮಕೂರು, ನಿಟ್ಟೂರು ಸೇರಿದಂತೆ ಅನೇಕ ಕಡೆ ಮಾಧುಸ್ವಾಮಿ ಬೆಂಬಲಿಗರು ಸಭೆ ನಡೆಸುತ್ತಿದ್ದಾರೆ. ವಿ. ಸೋಮಣ್ಣಗೆ ಟಿಕೆಟ್ ಕೊಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಜೆ.ಸಿ ಮಾಧುಸ್ವಾಮಿ ಅಭಿಮಾನಿ ಬಳಗದಿಂದ ಹಕ್ಕೊತ್ತಾಯ ಸಭೆ ನಡೆದಿದೆ.

ಮಾಧುಸ್ವಾಮಿಗೆ ಟಿಕೆಟ್ ನೀಡಿದ್ರೆ ಮಾತ್ರ ಬಿಜೆಪಿ ಗೆಲ್ಲಲಿದೆ. ಸೋಮಣ್ಣ ತುಮಕೂರು ಜಿಲ್ಲೆಗೆ ಬರಕೂಡದು ಕೂಡಲೇ ವಾಪಸ್ ಹೋಗಬೇಕು ಎಂದು ಮಾಧುಸ್ವಾಮಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವಿ. ಸೋಮಣ್ಣಗೆ ಟಿಕೆಟ್ ಕೊಡದಂತೆ ಕೆ.ಬಿ.ಕ್ರಾಸ್ ಬಳಿ ಪ್ರತಿಭಟನೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಹೈಡ್ರಾಮ ಸೃಷ್ಟಿಸಿದ್ದರು.

ಇದನ್ನೂ ಓದಿ : 2 ವರ್ಷಗಳ ನಂತ್ರ ಶೂಟಿಂಗ್ ಅಖಾಡದಲ್ಲಿ ಯಶ್ – ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ವಾಕಿಂಗ್ ವಿಡಿಯೋ ವೈರಲ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here