ಆಂಧ್ರಪ್ರದೇಶ : ತಿರುಪತಿ ದೇವಸ್ಥಾನದ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಟಿಟಿಡಿ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಎಕ್ಸ್ಕ್ಯೂಟೀವ್ ಆಫೀಸರ್ ಶ್ಯಾಮಲ ರಾವ್ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಈ ಹಿಂದೆ ಕಂಪನಿಯೊಂದು ಕಡಿಮೆ ದರಕ್ಕೆ ತುಪ್ಪ ನೀಡುತ್ತಿತ್ತು, ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ರು. ಕೂಡಲೇ ಲ್ಯಾಬ್ಗಳಿಗೆ ಆ ತುಪ್ಪವನ್ನ ಕಳಿಸಿದ್ದೆವು, NDDB, CAF ಲ್ಯಾಬ್ನಲ್ಲಿ ಪರೀಕ್ಷೆ ನಡೆದಿತ್ತು. ದನದ ಕೊಬ್ಬಿನಾಂಶ, ಹಂದಿಯ ಕೊಬ್ಬಿನಾಂಶ, ಸೂರ್ಯಕಾಂತಿ ಎಣ್ಣೆ ಬೆರಕೆ ಆಗಿರೋದು ಪತ್ತೆಯಾಯ್ತು. ಹೀಗಾಗಿ ಕಡಿಮೆ ದರದ ತುಪ್ಪದ ಖರೀದಿ ನಿಲ್ಲಿಸಲಾಯ್ತು. AR ಡೈರಿ ಖಾಸಗಿ ಕಂಪನಿ ಈ ತುಪ್ಪ ಪೂರೈಸುತ್ತಿತ್ತು ಎಂದು ಟಿಟಿಡಿ ಸಿಇಓ ಶ್ಯಾಮಲ ರಾವ್ ಹೇಳಿದ್ದಾರೆ.
ಲ್ಯಾಬ್ನ ವರದಿಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದು ದೃಢಪಟ್ಟಿದೆ. ಟಿಟಿಡಿ ಮಾಹಿತಿ ಬೆನ್ನಲ್ಲೇ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಆಂಧ್ರ ಸರ್ಕಾರ ತನಿಖೆಗೆ ಆದೇಶ ಮಾಡಿದೆ.
ಇದನ್ನೂ ಓದಿ : ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕ್ಕುಳಿ’ ಚಿತ್ರ – 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ..!