Download Our App

Follow us

Home » ಸಿನಿಮಾ » ಹೊಸ ಗೆಟಪ್‌ನಲ್ಲಿ ಪ್ರಭಾಸ್ – ‘ದಿ ರಾಜಾ ಸಾಬ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್​​..!

ಹೊಸ ಗೆಟಪ್‌ನಲ್ಲಿ ಪ್ರಭಾಸ್ – ‘ದಿ ರಾಜಾ ಸಾಬ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್​​..!

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾ ಸಾಬ್’ ಏ.10 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಮೇಕರ್ಸ್‌ ಇದೀಗ, ಪ್ರಭಾಸ್‌ ಅವರ ಬರ್ತ್‌ಡೇ ಪ್ರಯುಕ್ತ ವಿಶೇಷ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಹಾರರ್‌ ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಪ್ರಭಾಸ್‌ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

2 ನಿಮಿಷಗಳ ಮೋಷನ್ ಪೋಸ್ಟರ್ ಕಾಡಿನ ಮಧ್ಯದಲ್ಲಿ ಪಿಯಾನೋದಲ್ಲಿ ಕಾಡುವ “ಹ್ಯಾಪಿ ಬರ್ತ್‌ಡೇ” ಟ್ಯೂನ್‌ನೊಂದಿಗೆ ಶುರುವಾಗುತ್ತದೆ. ವೀಕ್ಷಕರನ್ನು ವಿಂಟೇಜ್ ಅರಮನೆಗೆ ಸಾಗಿಸುವ ಮೊದಲು ಕಾಡಿನಲ್ಲಿ ಸಂಚರಿಸುತ್ತಿರುವ ನಿಗೂಢ ವ್ಯಕ್ತಿಯೂ ಅಲ್ಲಿ ಕಾಣಿಸುತ್ತಾನೆ. ಒಮ್ಮಿಂದೊಮ್ಮೆ ಆ ಮನೆಯ ಬಾಗಿಲು ತೆರೆಯುತ್ತದೆ. ಅದರೊಳಗಿಂದ ಸೂಪರ್‌ಸ್ಟಾರ್‌ ಪ್ರಭಾಸ್‌ ಅವರ ದಿ ರಾಜಾಸಾಬ್‌ ಲುಕ್‌ ಅನಾವರಣಗೊಳ್ಳುತ್ತದೆ.

ವಿಂಟೇಜ್ ಅರಮನೆಯ ಭವ್ಯವಾದ ಹಿನ್ನೆಲೆಯಲ್ಲಿ ಕಪ್ಪು ಉಡುಪಿನಲ್ಲಿ ಸಿಂಹಾಸನದ ಮೇಲೆ ಪ್ರಭಾಸ್ ಕುಳಿತ ಭಂಗಿಯಲ್ಲಿ ಕಂಡಿದ್ದಾರೆ. ರಾಜನ ಲುಕ್‌ನಲ್ಲಿ ಕೈಯಲ್ಲಿ ಸಿಗಾರ್ ಹಿಡಿದು ರಗಡ್‌ ಅವತಾರದಲ್ಲಿ ಎದುರಾಗಿದ್ದಾರೆ. ಈ ಮೋಷನ್‌ ಪೋಸ್ಟರ್‌ನಲ್ಲಿ “ಹಾರರ್ ಈಸ್ ದಿ ನ್ಯೂ ಹ್ಯೂಮರ್” ಎಂಬ ಅಡಿಬರಹವಿದೆ. ನಂತರ “ಹ್ಯಾಪಿ ಬರ್ತ್‌ಡೇ, ರೆಬೆಲ್ ಸಾಬ್” ಎಂದು ಚಿತ್ರತಂಡ ಪ್ರಭಾಸ್‌ಗೆ ಶುಭಕೋರಿದೆ.

ಈ ಮೋಷನ್‌ ಪೋಸ್ಟರ್ ಅನ್ನು ಪ್ರಭಾಸ್‌ ತಮ್ಮ Instagramನಲ್ಲಿ ಹಂಚಿಕೊಂಡಿದ್ದಾರೆ. “ಇದು ಚಳಿ ಮತ್ತು ರೋಮಾಂಚನಗಳ ಸಮಯ. ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ” ಎಂದು ಬರೆದಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿದೆ. #RajaSaabBirthdayCelebrations ಎಂಬ ಹ್ಯಾಶ್‌ಟ್ಯಾಗ್ ಜಾಗತಿಕವಾಗಿ ಟ್ರೆಂಡಿಂಗ್ ಆಗಿದೆ.

ಆಕ್ಷನ್- ಪ್ಯಾಕ್ಡ್ ಶೈಲಿಯ ಈ ಸಿನಿಮಾದಲ್ಲಿ ಪ್ರಭಾಸ್‌ ಹೊಸ ಆಯಾಮದೊಂದಿಗೆ ಆಗಮಿಸಲು ಸಿದ್ಧರಾಗಿದ್ದಾರೆ. ಮೊದಲ ಸಲ ಹಾರರ್-ಕಾಮಿಡಿ ಪ್ರಕಾರವನ್ನು ಅಳವಡಿಸಿಕೊಂಡಿದ್ದಾರೆ. ಅಭಿಮಾನಿಗಳು ನಟನ ಈ ಹೊಸತನದ ಮೇಲೆ ಅಷ್ಟೇ ಕೌತುಕದಲ್ಲಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾ ಮಾರುತಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ತಮನ್ ಎಸ್ ಅವರ ಸಂಗೀತ ಈ ಚಿತ್ರಕ್ಕಿದೆ. 2025ರ ಏಪ್ರಿಲ್ 10 ರಂದು ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

ಇದನ್ನೂ ಓದಿ : ಆ ವಿಡಿಯೋ ವೈರಲ್ ಆಗಿ ಸಾಯಿ ಪಲ್ಲವಿಗೆ ಅವಕಾಶಗಳು ಕಡಿಮೆಯಾದವಾ? ನ್ಯಾಚುರಲ್ ಬ್ಯೂಟಿ ಹೇಳಿದ್ದೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

ಚನ್ನಪಟ್ಟಣ ರಣರಂಗದಲ್ಲಿ ಸೈನಿಕನ ವಿರುದ್ಧ ತೊಡೆ ತಟ್ಟಲು ಕಣಕ್ಕಿಳಿದ ನಿಖಿಲ್​ ಕುಮಾರಸ್ವಾಮಿ..!

ಬೆಂಗಳೂರು :  ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ಅಳೆದು ತೂಗಿ ಲೆಕ್ಕ ಹಾಕಿದ ಜೆಡಿಎಸ್​​ ಮತ್ತು ಬಿಜೆಪಿ ನಾಯಕರು ನಿಖಿಲ್ ಕುಮಾರಸ್ವಾಮಿ ಅವರಿಗೆ

Live Cricket

Add Your Heading Text Here