Download Our App

Follow us

Home » ಅಪರಾಧ » ಲಂಚ ಕೊಡಲು ಬಂದ ಕಾಂಟ್ರ್ಯಾಕ್ಟರ್​​ ಲೋಕಾ ಬಲೆಗೆ..

ಲಂಚ ಕೊಡಲು ಬಂದ ಕಾಂಟ್ರ್ಯಾಕ್ಟರ್​​ ಲೋಕಾ ಬಲೆಗೆ..

ಹಾವೇರಿ: ಲೋಕಾಯುಕ್ತ ಅಧಿಕಾರಿಗಳು ರಾಜ್ಯದಲ್ಲೇ ವಿಭಿನ್ನ ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗೆ ಲಂಚ ಕೊಡಲು ಬಂದ ಕಾಂಟ್ರ್ಯಾಕ್ಟರ್​​ ಲೋಕಾ ಬಲೆಗೆ ಬಿದ್ದಿದ್ದಾನೆ.

ಗುರುಕೃಪಾ ಎಂಟರ್‌ಪ್ರೈಸಸ್‌ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್‌ ಬಂಧಿತ ಕಾಂಟ್ರ್ಯಾಕ್ಟರ್. ಇವರ ವಿರುದ್ಧ ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್‌ ಹೆಗಡೆ ದೂರು ಕೊಟ್ಟಿದ್ದರು.

ಹಾವೇರಿ ತಾಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್‌ನಲ್ಲಿ ಶರಣಪ್ಪ ಅವರು ಈ ಟೆಂಡರ್‌ ನನಗೇ ಸಿಗುವಂತೆ ಮಾಡಿದ್ದಲ್ಲಿ ಟೆಂಡರ್‌ ಮೊತ್ತದ ಶೇ. 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾಯಿಸಿ, ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರು ಎಂದು ತಾಪಂ ಇಒ ಭರತ್‌ ಹೆಗಡೆ ಲೋಕಾಯುಕ್ತರಿಗೆ ದೂರು ನೀಡಿದ್ದರು.

2 ಲಕ್ಷ ರೂ.ಮುಂಗಡವಾಗಿ ಅಧಿಕಾರಿಗೆ ನೀಡೋದಾಗಿ ಗುತ್ತಿಗೆದಾರ ಆಮಿಷವೊಡಿದ್ದನು.  ಖಾಸಗಿ ಹೋಟೆಲ್‌ನಲ್ಲಿ 2 ಲಕ್ಷದ ಪೈಕಿ 99 ಸಾವಿರ ಹಣ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ರೇಡ್​ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.

ಸರ್ಕಾರಿ ಅಧಿಕಾರಿ ಲಂಚ ಮುಟ್ಟದೆ, ಲಂಚ ಕೊಡುವವನನ್ನೇ ಹಿಡಿದುಕೊಟ್ಟಿದ್ದು, ಲೋಕಾಯುಕ್ತ ಪ್ರಕರಣಗಳಲ್ಲಿಯೇ ವಿರಳ ಘಟನೆಯಾಗಿದೆ. ರಿವರ್ಸ್ ಟ್ರ್ಯಾಪ್ ಮಾಡಿ ಲಂಚ ಕೊಡುವವರಿಗೂ ಲೋಕಾ ಶಾಕ್​ ಕೊಟ್ಟಿದೆ.

ಇದನ್ನೂ ಓದಿ : ಮಾಲೂರು MLA ನಂಜೇಗೌಡ ಮನೆಯಲ್ಲಿ 25 ಲಕ್ಷ ವಶ..

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here