Download Our App

Follow us

Home » ಸಿನಿಮಾ » ನಿಮ್ಮ ಹೊಕ್ಕಳ ಫೋಟೋ ಕಳ್ಸಿ ಅಂತ ಕೇಳೊರಿಗೆ ಖಡಕ್ ತಿರುಗೇಟು ನೀಡಿದ ತನಿಷಾ : ಏನಂದ್ರು ಗೊತ್ತಾ?

ನಿಮ್ಮ ಹೊಕ್ಕಳ ಫೋಟೋ ಕಳ್ಸಿ ಅಂತ ಕೇಳೊರಿಗೆ ಖಡಕ್ ತಿರುಗೇಟು ನೀಡಿದ ತನಿಷಾ : ಏನಂದ್ರು ಗೊತ್ತಾ?

ಕನ್ನಡದ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್ ಶೋಗೆ ಹೋಗಿ ಬಂದಮೇಲೆ ಕರ್ನಾಟಕದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರ ಜೊತೆ ಜೊತೆಗೆ ತಮ್ಮದೇ ವ್ಯಾಪಾರ, ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತನಿಷಾ ಕುಪ್ಪಂಡ ಒಂದಲ್ಲ ಒಂದು ವಿಭಿನ್ನ ವಿಚಾರ ಹೊತ್ತು ಸೋಶಿಯಲ್ ಮೀಡಿಯಾದಲ್ಲಿ ಯಾವಗಲೂ ಆಕ್ಟೀವ್​ ಆಗಿರುತ್ತಾರೆ.

ಹಾಗೆಯೇ ತನಿಷಾ ಕೆಲವೊಮ್ಮೆ ಇಷ್ಟಪಟ್ಟು ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಲು ಇನ್‌ಸ್ಟಾಗ್ರಾಮ್​ನ್ನು​​ ಬಳಸಿಕೊಳ್ಳುತ್ತಾರೆ. “ಆಸ್ಕ್ ಮಿ ಎನಿಥಿಂಗ್” ಎಂಬ ಇನ್‌ಸ್ಟಾಗ್ರಾಮ್‌ ಸ್ಟೋರಿ ಸೆಷನ್​ ನಡೆಸುತ್ತಾರೆ. ಅಭಿಮಾನಿಗಳು ಕೇಳುವ ಹಲವು ಪ್ರಶ್ನೆಗಳಿಗೆ ಸಂತಸದಿಂದ ಉತ್ತರಿಸುತ್ತಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈಗೀಗಾ ಫೇಕ್ ಅಕೌಂಟ್‌ಗಳ ಭರಾಟೆ ಕೂಡ ಜೋರಾಗಿದೆ. ಕಿಡಿಗೇಡಿಗಳು ತಾರೆಯರ ಬಗ್ಗೆ ಕೆಟ್ಟ ಕೆಟ್ಟ ಪೋಸ್ಟ್‌ಗಳನ್ನು ಮಾಡುವುದು, ಡೀಪ್‌ಫೇಕ್ ಫೋಟೊ, ವೀಡಿಯೋ ವೈರಲ್ ಮಾಡುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುವವರೇ ಹೆಚ್ಚು. ನೇರವಾಗಿ ಪ್ರಶ್ನೆ ಕೇಳುವ ಅವಕಾಶ ಇರುವುದರಿಂದ ಕೆಟ್ಟ ಕಾಮೆಂಟ್ ಮಾಡುವುದು, ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳುವುದು ಕೆಲವುರು ಮಾಡುತ್ತಿರುತ್ತಾರೆ. ಇದೀಗ ನಟಿ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ತಮಗೆ ಎದುರಾದ ಅಸಭ್ಯ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂತವರಿಗೆ ಗರಂ ಆಗಿ ಖಡಕ್ ತಿರುಗೇಟು ನೀಡಿದ್ದಾರೆ.

“ನೀವು ನಮ್ಮನ್ನ ಸಾಕಿಲ್ಲ, ಸಾಕಲ್ಲ, ಯಾಕೆ ಗುರು ಹೀಗೆಲ್ಲಾ ಮಾತನಾಡುತ್ತೀರಾ? ಏನೇನೋ ಕಾಮೆಂಟ್ ಮಾಡ್ಬೇಡಿ. ಹೇಳಬೇಕು ಎನ್ನುವುದನ್ನು ಸರಿಯಾಗಿ ಹೇಳಿ. ಅದು ಬಿಟ್ಟು ಹೋಗೆ ಬಾರೆ ಎಂದರೆ ನಿಮ್ಮ ಮೇಲಿನ ಮರ್ಯಾದೆ ಹೋಗುತ್ತೆ. ನಿಮ್ಮ ಹೊಕ್ಕಳ ಫೋಟೊ ಕಳ್ಸಿ ಅಂತ ಕೇಳೊರಿಗೆ ಹೋಗ್‌ ಗುರು ನಿಮ್ಮ ಅಮ್ಮನನ್ನು ಕೇಳು, ಅವ್ರು ಮನೆಯಲ್ಲೇ ಇರ್ತಾರಲ್ಲ. ನಿನ್ನ ಜೊತೆ ಇರ್ತಾರೆ. ಕೇಳು ಫೋಟೊ ಕಳಿಸ್ತಾರೆ, ಇಲ್ಲ ನೇರವಾಗಿ ನೋಡು. ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣು” ಎಂದು ತನಿಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮಗಳನ್ನು ನಾಳೆ ಇದೇ ರೀತಿ ಕೇಳ್ತಾರೆ. ಅಷ್ಟೆಲ್ಲಾ ಯಾಕೆ ಇವತ್ತು ನೀನು ನನ್ನನ್ನು ಕೇಳಿದ್ರೆ, ನಾಳೆ ನನ್ನ ಮಗ ನಿನ್ನ ಮಗಳನ್ನು ಕೇಳ್ತಾನೆ ಅಲ್ವಾ? ಎಂದು ತನಿಷಾ ಹೇಳಿದ್ದಾರೆ. ಸದ್ಯ ಅವರ ಮಾತುಗಳು ವೈರಲ್ ಆಗುತ್ತಿದೆ.

ಇದನ್ನೂ  ಓದಿ : ಪತ್ನಿ, ಮಕ್ಕಳೊಂದಿಗೆ ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಶಿಫ್ಟ್ ಆದ ರಿಷಬ್ ಶೆಟ್ಟಿ : ಕಾರಣವೇನು?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here